ಕನ್ನಡ ನೆಲದಲ್ಲಿದ್ದು ಇಲ್ಲೇ ಅಗತ್ಯ ಸೌಲಭ್ಯ ಪಡೆದು ಸರ್ಕಾರಕ್ಕೆ ಮಾರುಕಟ್ಟೆ ಮೂಲಕ ತೆರಿಗೆ ಕಟ್ಟಬೇಕಾದ ನಾವು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ವ್ಯವಹಾರಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
– ಸತೀಶ ಹಿರೇಮಠ, ಮಾಜಿ ಅಧ್ಯಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಡಿಗೌಡಗಾಂವ
ಎಪಿಎಂಸಿಗೆ ವಿಶಾಲ ಸ್ಥಳದ ಅವಕಾಶವಿದ್ದು ಪಟ್ಟಣದಲ್ಲಿ ಶಾಶ್ವತ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು
– ಪ್ರವೀಣ ಕಾಡಾದಿ, ಸದಸ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹುಲಸೂರ
ಹುಲಸೂರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಹತ್ತಾರು ಹಳ್ಳಿಗಳ 400ಕ್ಕೂ ಹೆಚ್ಚು ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಮಾರುತ್ತಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ತರಕಾರಿ ಮಾರುಕಟ್ಟೆಗೆ ಹೋಗಲು ಸಿದ್ಧರಿದ್ದೇವೆ.