ಬಸವಕಲ್ಯಾಣ: ಇಲ್ಲಿನ ಕೃಷಿ ಇಲಾಖೆಯಿಂದ ತಾಲ್ಲೂಕಿನಲ್ಲಿ ಕೈಗೊಂಡಿರುವ ಕೃಷಿ ಅಭಿಯಾನದ ಪ್ರಚಾರ ವಾಹನಗಳಿಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಳ್ಳೆ ವಾಹನಗಳಿಗೆ ಪೂಜೆ ನೆರವೆರಿಸಿ ಬೀಳ್ಕೊಟ್ಟರು. ತಾಂತ್ರಿಕ ಸಲಹೆಗಾರ ಶತ್ರುಘ್ನ ಸದುವಾಲೆ, ಕೃಷಿ ಅಧಿಕಾರಿಗಳಾದ ರತನಕುಮಾರ ಹಲಶೆಟ್ಟೆ, ವಿಕ್ರಮ ಮುಗಳೆ, ಶ್ರೀಕೃಷ್ಣ ಪಾಟೀಲ, ಶಣ್ಮುಖ, ಸತೀಶ, ಕವಿರಾಜ ಕಿಣಗಿ, ಧರ್ಮೇಂದ್ರ, ನಿತೀನ ಬಿರಾದಾರ ಪಾಲ್ಗೊಂಡಿದ್ದರು.