ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಂದ ಪರಿಹಾರಧನ ವಿತರಣೆ

Last Updated 3 ಆಗಸ್ಟ್ 2013, 10:29 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ವಿವಿಧೆಡೆ ಕೃಷಿ ಚಟುವಟಿಕೆ ವೇಳೆ ಹಾವು ಕಡಿದು ಮೃತರಾದವರ ಕುಟುಂಬದವರಿಗೆ ಶುಕ್ರವಾರ ತಲಾ ರೂ. 1 ಲಕ್ಷದ ಪರಿಹಾರಧನ ಚೆಕ್ ವಿತರಿಸಲಾಯಿತು.

ಕೃಷಿ ಇಲಾಖೆಯಿಂದ ಮಂಜೂರಾದ ಚೆಕ್ ಅನ್ನು ಶಾಸಕ ಪ್ರಭು ಚವ್ಹಾಣ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಿದರು.

ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಬಿರಾದಾರ, ಮುಖ್ಯಾಧಿಕಾರಿ ಗದಗೆಪ್ಪ, ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಉಪಸ್ಥಿತರಿದ್ದರು.

ಪರಿಹಾರ ಪಡೆದವರು: ಲಲಿತಾ ಕಾಶಿರಾಮ ಜಾಧವ್ (ರಾಮತಾಂಡಾ), ಕಮಳಾಬಾಯಿ ಬೀರಗೊಂಡ (ಎಕಲಾರ), ಶೋಭಾಬಾಯಿ ವಿಠಲರಾವ, ಶಾಲಿಕಾ ಮಲ್ಲಿಕಾರ್ಜುನ, ಮಾಣಿಕ ಭೀಮಪ್ಪ (ಕೌಠಾ (ಬಿ)ಗ್ರಾಮ), ಮಾಣಿಕ ಶಿವಪ್ಪ (ಖಾನಾಪುರ), ವಿಠಲ ನಾಗಪ್ಪ (ನಾಗಮಾರಪಳ್ಳಿ), ಮುಕ್ತಮ್ಮ ಮುಕ್ತಪ್ಪ (ಸುಂದಾಳ), ಶಾಂತಾಬಾಯಿ ಸೋಪಾನ (ಹುಲ್ಯಾಳ ಗ್ರಾಮ) ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT