ದೇವಸ್ಥಾನದ ಪ್ರಧಾನ ಅರ್ಚಕ ರಾಘವನ್ ಅವರು ಪೂಜೆ ಸಲ್ಲಿಸಿದ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ತಂದು ನಂತರ ರಥದಲ್ಲಿಡಲಾಯಿತು. ಭಕ್ತರು ಜೈಕಾರ ಕೂಗುತ್ತಾ ರಥವನ್ನು ಎಳೆದರು. ರಾಜಬೀದಿಯಲ್ಲಿ ಸಾಗಿದ ರಥ ದೇವಾಲಯ ಬೀದಿ ಮೂಲಕ ಬಂದು ಮೂಲ ಸ್ಥಾನ ಸೇರಿತು. ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹೂವು ಹಣ್ಣು ಎಸೆದು, ಕೈಮುಗಿದರು.