ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಬಂಡಿಗೇರೆ ಮಹದೇಶ್ವರ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಕಾರ್ತಿಕ ಮಾಸದ ಅಂಗವಾಗಿ ಮತ್ತು ದೀಪಾವಳಿ ಹಬ್ಬದ ದಿನದಿಂದ 9 ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಪಟ್ಟಕ್ಕಿರಿಸಲಾಯಿತು. ಪ್ರತಿದಿನ ಗ್ರಾಮದ ಪ್ರಮುಖರು ಮನೆಗೊಬ್ಬರಂತೆ ಪೂಜೆ ಸಲ್ಲಿಸಿದರು.
ನಂತರ ರಾತ್ರಿ ಉತ್ಸವ ನಡೆಸಿ ಗ್ರಾಮದ ವರವಲಯದಲ್ಲಿರುವ ಮಹದೇಶ್ವರ ಸ್ವಾಮಿ ದೇವಾಲಯದ ಬಳಿ ಬನ್ನಿ ಮರಕ್ಕೆ ತೆರಳಿ ಬನ್ನಿ ಮಂಟಪದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.