<p><strong>ಚಾಮರಾಜನಗರ</strong>: ‘ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಡಲಿ. ಇಲ್ಲವಾದರೆ, ಆತ್ಮಹತ್ಯೆಗೆ ಅನುಮತಿ ನೀಡಲಿ. ವೇತನವೂ ಇಲ್ಲದೆ, ಉದ್ಯೋಗ ಭದ್ರತೆಯೂ ಇಲ್ಲದೆ ಬದುಕುವುದಾದರೂ ಹೇಗೆ ?</p>.<p>–ಮೂರು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಪ್ರಶ್ನೆ ಇದು.</p>.<p>2021, ಮೇ 2ರಂದು ಮೃತಪಟ್ಟ 24 ಮಂದಿಯ ಕುಟುಂಬದ ಸದಸ್ಯರು ಇಂದಿಗೂ ಸೂಕ್ತ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ, ಸರ್ಕಾರಿ ಉದ್ಯೋಗಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತಿದ್ದಾರೆ.</p>.<p><strong>ಹುಸಿಯಾದ ಭರವಸೆ ?</strong></p>.<p>2022ರ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಗಾಗಿ ಗುಂಡ್ಲುಪೇಟೆಗೆ ಬಂದಾಗ, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದರು.</p>.<p>ಅದಾದ 8 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಉದ್ಯೋಗ, ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಅಲ್ಪಾವಧಿಯಲ್ಲೇ ಭ್ರಮನಿರಸನವಾಗಿತ್ತು. ಸಂತ್ರಸ್ತರ ಹೋರಾಟ ತೀವ್ರಗೊಳ್ಳುತ್ತಲೇ ಕೆಲವರಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗಿತ್ತು.</p>.<p>ಕೆಲವರು, ‘ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಬೇಕು’ ಎಂದು ಗುತ್ತಿಗೆ ನೌಕರಿ ತಿರಸ್ಕರಿಸಿದ್ದರು. ಅನಿವಾರ್ಯತೆಗೆ ಸಿಲುಕಿದ್ದ 10ಕ್ಕೂ ಹೆಚ್ಚು ಮಂದಿ, ಇದೇ ಫೆಬ್ರುವರಿಯಿಂದ ಸರ್ಕಾರಿ ಕಚೇರಿಗಳಲ್ಲಿ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರಾಗಿ ಸೇರಿಕೊಂಡರು.</p>.<p>ಆದರೆ, ಫೆಬ್ರುವರಿ ಹೊರುತುಪಡಿಸಿ ಉಳಿದ ತಿಂಗಳ ವೇತನ ಯಾರಿಗೂ ಸಿಕ್ಕಿಲ್ಲ. ಈಗ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.</p>.<p><strong>ಸಿಮ್ಸ್ಗೆ ವರ್ಗಾವಣೆ:</strong></p>.<p>ಇದರೊಂದಿಗೆ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲ್ಲೂಕು ಕಚೇರಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಇದೀಗ ಸಿಮ್ಸ್ನಲ್ಲಿ (ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ) ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.</p>.<p>‘ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಪೋಷಕರ ಜವಾಬ್ದಾರಿ ಹೊತ್ತುಕೊಂಡಿದ್ದು ಏಕಾಏಕಿ ಸಿಮ್ಸ್ನಲ್ಲಿ ಕೆಲಸ ಮಾಡಿ ಎಂದರೆ ಹೇಗೆ? ಮಕ್ಕಳನ್ನು, ಅವಲಂಬಿತರನ್ನು ನೋಡಿಕೊಳ್ಳುವವರು ಯಾರು? ಎಂಬುದು ಸಂತ್ರಸ್ತರ ಪ್ರಶ್ನೆ.</p>.<p>‘ಕಾಯಂ ನೌಕರಿ ಕೊಡುವವರೆಗೂ ಈಗಿನ ಸ್ಥಳದಲ್ಲೇ ಕರ್ತವ್ಯ ಮಾಡಲು ಅವಕಾಶ ಕೊಡಿ. ಸಿಮ್ಸ್ನಲ್ಲಿ ಮಾತ್ರ ಬೇಡ, ಮನೆಯವರನ್ನು ಕಳೆದುಕೊಂಡ ಆಸ್ಪತ್ರೆಯ ಪರಿಸರದಲ್ಲಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುತ್ತಾರೆ ಅವರು.</p>.<p>ನಮಗೆ ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಟ್ಟು ಜೀವನಕ್ಕೊಂದು ದಾರಿ ಮಾಡಲಿ.</p><p>–ಜ್ಯೋತಿ ಸಂತ್ರಸ್ತೆ</p>.<p>ಪತಿ ತೀರಿಹೋದ ಬಳಿಕ ಎಲ್ಲರೂ ದೂರವಾದರು. ತವರು ಮನೆಯಲ್ಲಿದ್ದೇನೆ. ಕಾಯಂ ನೌಕರಿ ಕೊಟ್ಟರೆ ನೆಮ್ಮದಿ.</p><p>–ಸವಿತಾ ಸಂತ್ರಸ್ತೆ</p>.<p>ಮೂವರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ದಯವಿಟ್ಟು ಬದುಕನ್ನು ಕಿತ್ತುಕೊಳ್ಳಬೇಡಿ.</p><p>–ಸುಶೀಲಾ ಸಂತ್ರಸ್ತೆ</p>.<p>ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕಾಯಂ ನೌಕರಿ ನೀಡುವವರೆಗೂ ಈಗಿನ ಸ್ಥಳದಲ್ಲೇ ಮುಂದುವರಿಸಬೇಕು.</p><p>–ಎಂ.ಮಹೇಶ್ ನಗರಸಭೆ ಸದಸ್ಯ</p>.<p>ಸಂತ್ರಸ್ತರಿಗೆ ಸಿಮ್ಸ್ನಲ್ಲಿ ಕೆಲಸ ನೀಡುವಂತೆ ಸರ್ಕಾರ ಆದೇಶಿಸಿದೆ. ಅವರಿಗೆ ಕಾಯಂ ನೌಕರಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಜುಲೈ 1ರಂದು ಸಭೆ ನಡೆಸಲಾಗುವುದು.</p><p>–ಶಿಲ್ಪಾ ನಾಗ್ ಜಿಲ್ಲಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ‘ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ, ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಡಲಿ. ಇಲ್ಲವಾದರೆ, ಆತ್ಮಹತ್ಯೆಗೆ ಅನುಮತಿ ನೀಡಲಿ. ವೇತನವೂ ಇಲ್ಲದೆ, ಉದ್ಯೋಗ ಭದ್ರತೆಯೂ ಇಲ್ಲದೆ ಬದುಕುವುದಾದರೂ ಹೇಗೆ ?</p>.<p>–ಮೂರು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರ ಪ್ರಶ್ನೆ ಇದು.</p>.<p>2021, ಮೇ 2ರಂದು ಮೃತಪಟ್ಟ 24 ಮಂದಿಯ ಕುಟುಂಬದ ಸದಸ್ಯರು ಇಂದಿಗೂ ಸೂಕ್ತ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ, ಸರ್ಕಾರಿ ಉದ್ಯೋಗಕ್ಕಾಗಿ, ಸ್ವಾಭಿಮಾನದ ಬದುಕಿಗಾಗಿ ಹೋರಾಡುತ್ತಿದ್ದಾರೆ.</p>.<p><strong>ಹುಸಿಯಾದ ಭರವಸೆ ?</strong></p>.<p>2022ರ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಗಾಗಿ ಗುಂಡ್ಲುಪೇಟೆಗೆ ಬಂದಾಗ, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದರು.</p>.<p>ಅದಾದ 8 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಉದ್ಯೋಗ, ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಅಲ್ಪಾವಧಿಯಲ್ಲೇ ಭ್ರಮನಿರಸನವಾಗಿತ್ತು. ಸಂತ್ರಸ್ತರ ಹೋರಾಟ ತೀವ್ರಗೊಳ್ಳುತ್ತಲೇ ಕೆಲವರಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗಿತ್ತು.</p>.<p>ಕೆಲವರು, ‘ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಬೇಕು’ ಎಂದು ಗುತ್ತಿಗೆ ನೌಕರಿ ತಿರಸ್ಕರಿಸಿದ್ದರು. ಅನಿವಾರ್ಯತೆಗೆ ಸಿಲುಕಿದ್ದ 10ಕ್ಕೂ ಹೆಚ್ಚು ಮಂದಿ, ಇದೇ ಫೆಬ್ರುವರಿಯಿಂದ ಸರ್ಕಾರಿ ಕಚೇರಿಗಳಲ್ಲಿ ‘ಡಿ’ ದರ್ಜೆ ಹೊರಗುತ್ತಿಗೆ ನೌಕರರಾಗಿ ಸೇರಿಕೊಂಡರು.</p>.<p>ಆದರೆ, ಫೆಬ್ರುವರಿ ಹೊರುತುಪಡಿಸಿ ಉಳಿದ ತಿಂಗಳ ವೇತನ ಯಾರಿಗೂ ಸಿಕ್ಕಿಲ್ಲ. ಈಗ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.</p>.<p><strong>ಸಿಮ್ಸ್ಗೆ ವರ್ಗಾವಣೆ:</strong></p>.<p>ಇದರೊಂದಿಗೆ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲ್ಲೂಕು ಕಚೇರಿ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಇದೀಗ ಸಿಮ್ಸ್ನಲ್ಲಿ (ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧನಾ ಆಸ್ಪತ್ರೆ) ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.</p>.<p>‘ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಪೋಷಕರ ಜವಾಬ್ದಾರಿ ಹೊತ್ತುಕೊಂಡಿದ್ದು ಏಕಾಏಕಿ ಸಿಮ್ಸ್ನಲ್ಲಿ ಕೆಲಸ ಮಾಡಿ ಎಂದರೆ ಹೇಗೆ? ಮಕ್ಕಳನ್ನು, ಅವಲಂಬಿತರನ್ನು ನೋಡಿಕೊಳ್ಳುವವರು ಯಾರು? ಎಂಬುದು ಸಂತ್ರಸ್ತರ ಪ್ರಶ್ನೆ.</p>.<p>‘ಕಾಯಂ ನೌಕರಿ ಕೊಡುವವರೆಗೂ ಈಗಿನ ಸ್ಥಳದಲ್ಲೇ ಕರ್ತವ್ಯ ಮಾಡಲು ಅವಕಾಶ ಕೊಡಿ. ಸಿಮ್ಸ್ನಲ್ಲಿ ಮಾತ್ರ ಬೇಡ, ಮನೆಯವರನ್ನು ಕಳೆದುಕೊಂಡ ಆಸ್ಪತ್ರೆಯ ಪರಿಸರದಲ್ಲಿ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುತ್ತಾರೆ ಅವರು.</p>.<p>ನಮಗೆ ಕೊಟ್ಟ ಮಾತಿನಂತೆ ಸರ್ಕಾರಿ ಉದ್ಯೋಗ ಕೊಟ್ಟು ಜೀವನಕ್ಕೊಂದು ದಾರಿ ಮಾಡಲಿ.</p><p>–ಜ್ಯೋತಿ ಸಂತ್ರಸ್ತೆ</p>.<p>ಪತಿ ತೀರಿಹೋದ ಬಳಿಕ ಎಲ್ಲರೂ ದೂರವಾದರು. ತವರು ಮನೆಯಲ್ಲಿದ್ದೇನೆ. ಕಾಯಂ ನೌಕರಿ ಕೊಟ್ಟರೆ ನೆಮ್ಮದಿ.</p><p>–ಸವಿತಾ ಸಂತ್ರಸ್ತೆ</p>.<p>ಮೂವರು ಹೆಣ್ಣುಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ದಯವಿಟ್ಟು ಬದುಕನ್ನು ಕಿತ್ತುಕೊಳ್ಳಬೇಡಿ.</p><p>–ಸುಶೀಲಾ ಸಂತ್ರಸ್ತೆ</p>.<p>ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕಾಯಂ ನೌಕರಿ ನೀಡುವವರೆಗೂ ಈಗಿನ ಸ್ಥಳದಲ್ಲೇ ಮುಂದುವರಿಸಬೇಕು.</p><p>–ಎಂ.ಮಹೇಶ್ ನಗರಸಭೆ ಸದಸ್ಯ</p>.<p>ಸಂತ್ರಸ್ತರಿಗೆ ಸಿಮ್ಸ್ನಲ್ಲಿ ಕೆಲಸ ನೀಡುವಂತೆ ಸರ್ಕಾರ ಆದೇಶಿಸಿದೆ. ಅವರಿಗೆ ಕಾಯಂ ನೌಕರಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ. ಜುಲೈ 1ರಂದು ಸಭೆ ನಡೆಸಲಾಗುವುದು.</p><p>–ಶಿಲ್ಪಾ ನಾಗ್ ಜಿಲ್ಲಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>