ಚಾಮರಾಜನಗರ: ಪಟ್ಟಣದ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಲ್. ದೀಪಕ್ ಅವರು 2017ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಗೆ ನೀಡಿದ ಅತ್ಯುತ್ತಮ ಸೇವೆ ಪರಿಗಣಿಸಿಈ ಗೌರವಕ್ಕೆ ಆಯ್ಕೆ ಮಾಡಲಾಗುತ್ತದೆ.
2007ರಲ್ಲಿ ಪೊಲೀಸ್ ಸೇವೆಗೆ ಸೇರಿರುವ ದೀಪಕ್ ಅವರು, 2016ರಿಂದ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲು ಅವರು ಮಲೆಮಹದೇಶ್ವರಬೆಟ್ಟ, ರಾಮಾಪುರ, ಚಾಮರಾಜನಗರ ಪಟ್ಟಣ, ಪೂರ್ವ (ರಾಮಸಮುದ್ರ), ಸಂತೇಮರಹಳ್ಳಿ, ಗೋಣಿಕೊಪ್ಪಲು ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು.