ತಾಲ್ಲೂಕಿನಾದ್ಯಂತ ಹೆಚ್ಚಿನ ರೈತರು ತರಕಾರಿ ಬೆಳೆ ಬೆಳೆದಿದ್ದಾರೆ. ಪಕ್ಕದ ತಮಿಳುನಾಡು ಮತ್ತು ಕೇರಳಕ್ಕೆ ಪ್ರತಿದಿನ 100ರಿಂದ 200 ಲಾರಿಗಳ ಮೂಲಕ ಸಾಗಣಿಕೆ ಮಾಡಲಾಗುತ್ತಿದೆ. ತಮಿಳುನಾಡಿನ ಊಟಿ, ಈರೋಡು, ಕೊಯಮತ್ತೂರು, ಧರ್ಮಪುರಿ, ಸೇಲಂ ಮತ್ತು ಕೇರಳದ ತ್ರಿಶ್ಶೂರ್, ವಯನಾಡು, ಕೊಚ್ಚಿ, ಪಾಲಕ್ಕಾಡ್ ಸೇರಿದಂತೆ ಇತರೆ ಜಿಲ್ಲೆಗಳು ಗುಂಡ್ಲುಪೇಟೆಯ ತರಕಾರಿಯನ್ನೇ ಅವಲಂಬಿಸಿದೆ.