ಡಾ.ಬಿ.ಸಿ.ರಾಯ್ ಜನ್ಮ ದಿನದ ಗೌರವಾರ್ಥ ಪ್ರತಿ ವರ್ಷ ಜುಲೈ 1ರಂದು ‘ವೈದ್ಯರ ದಿನ’ವಾಗಿ ಆಚರಿಸಲಾಗುತ್ತಿದೆ. ಪಶ್ಚಿಮ ಬಂಗಾಳ ಮೂಲದ ಡಾ.ಬಿ.ಸಿ.ರಾಯ್ ಶ್ರೇಷ್ಠ ವೈದ್ಯರು. ವೈದ್ಯಕೀಯ ಜತೆಗೆ ಶಿಕ್ಷಣ ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬಂಗಾಲದ ಮುಖ್ಯಮಂತ್ರಿ ಆಗಿಯೂ ಜನಮನ್ನಣೆ ಗಳಿಸಿದ್ದರು. ಅವರ ಗೌರವಾರ್ಥವಾಗಿ ಆಚರಿಸುವ ರಾಷ್ಟ್ರೀಯ ವೈದ್ಯರ ದಿನದಂದು ವೈದ್ಯರಿಗೆ ಗೌರವ ಸಲ್ಲಿಸಬೇಕಾಗಿರುವುದು ಸಮಾಜದ ಕರ್ತವ್ಯ.