<p><strong>ಚಾಮರಾಜನಗರ</strong>: ಅಬಕಾರಿ ಇಲಾಖೆ ಸನ್ನದು (ಪರವಾನಗಿ) ಹಂಚಿಕೆ ಪ್ರಕ್ರಿಯೆಯ ಇ-ಹರಾಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಒತ್ತಾಯಿಸಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯಲ್ಲಿ 7 ಪರವಾನಗಿ ಸೇರಿದಂತೆ ರಾಜ್ಯದಾದ್ಯಂತ ಸಿಎಲ್-2, ಸಿಎಲ್-9 ಸೇರಿದಂತೆ 600ಕ್ಕೂ ಹೆಚ್ಚು ನವೀಕರಣಗೊಳ್ಳದ ಪರವಾನಗಿ, ರದ್ದಾಗಿರುವ ಮತ್ತು ಇತರೆ ಕಾರಣಗಳಿಂದ ಸರ್ಕಾರದ ಸುಪರ್ದಿಯಲ್ಲಿರುವ ಪರವನಾಗಿಗಳನ್ನು ಇ ಹರಾಜು ಹಾಕುತ್ತಿದೆ. ಆದರೆ ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಅರ್ಹರನ್ನು ಹೊರಗಿಡುವ ಷಡ್ಯಂತ್ರ ಎಂದು ಟೀಕಿಸಿದರು.</p>.<p>ಈಚೆಗೆ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಇ ಹರಾಜು ಸಂಬಂಧ ನಡೆದ ತರಬೇತಿ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಲಾಗಿದೆ. ಎಲ್ಲ ಪರವಾನಗಿದಾರರಿಗೆ ಹಾಗೂ ಉದ್ಯಮಿಗಳಿಗೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಸರಿಯಲ್ಲ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಹರಾಜಿನ ಕನಿಷ್ಠ ಮೊತ್ತವನ್ನು ₹ 80 ಲಕ್ಷಕ್ಕೆ ನಿಗದಿ ಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇ ಹರಾಜು ಪ್ರಕ್ರಿಯೆಯಿಂದ ದೇಶದ ಯಾವುದೇ ಭಾಗದ ಉದ್ಯಮಿಗಳು ಭಾಗವಹಿಸಲು ಅವಕಾಶ ಇರುವುದರಿಂದ ಸ್ಥಳೀಯರು ಅವಕಾಶ ವಂಚಿರಾಗಲಿದ್ದಾರೆ. ಮದ್ಯದಂಗಡಿಗಳಲ್ಲಿ ಹೊರ ರಾಜ್ಯದವರಿಗೆ ಕೆಲಸ ಸಿಗುತ್ತದೆ ಎಂದು ಆರೋಪಿಸಿದರು.</p>.<p>ಅಬಕಾರಿ ಸನ್ನದು ಹಂಚಿಕೆಯಲ್ಲಿ ಮೀಸಲಾತಿ ತಂದಿರುವುದು ಸ್ವಾಗತಾರ್ಹವಾದರೂ ಜಿಲ್ಲಾವಾರು ಮೀಸಲಾತಿ ಜಾರಿಗೊಳಿಸದಿರುವುದರಿಂದ ಉಳ್ಳವರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲಾವಾರು ಮೀಸಲಾತಿ ನಿಗದಿಪಡಿಸಿ ಪರವಾನಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮನೋಜ್ ಪಟೇಲ್, ಬಂಗಾರ ನಾಯಕ, ಮಹೇಶ್ ಪ್ರಸಾದ್, ರಾಮಸಮುದ್ರ ಶಿವಣ್ಣ, ಕೂಸಣ್ಣ, ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಅಬಕಾರಿ ಇಲಾಖೆ ಸನ್ನದು (ಪರವಾನಗಿ) ಹಂಚಿಕೆ ಪ್ರಕ್ರಿಯೆಯ ಇ-ಹರಾಜಿನಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಒತ್ತಾಯಿಸಿದರು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯಲ್ಲಿ 7 ಪರವಾನಗಿ ಸೇರಿದಂತೆ ರಾಜ್ಯದಾದ್ಯಂತ ಸಿಎಲ್-2, ಸಿಎಲ್-9 ಸೇರಿದಂತೆ 600ಕ್ಕೂ ಹೆಚ್ಚು ನವೀಕರಣಗೊಳ್ಳದ ಪರವಾನಗಿ, ರದ್ದಾಗಿರುವ ಮತ್ತು ಇತರೆ ಕಾರಣಗಳಿಂದ ಸರ್ಕಾರದ ಸುಪರ್ದಿಯಲ್ಲಿರುವ ಪರವನಾಗಿಗಳನ್ನು ಇ ಹರಾಜು ಹಾಕುತ್ತಿದೆ. ಆದರೆ ಹರಾಜು ಪ್ರಕ್ರಿಯೆ ಅವೈಜ್ಞಾನಿಕವಾಗಿದ್ದು ಅರ್ಹರನ್ನು ಹೊರಗಿಡುವ ಷಡ್ಯಂತ್ರ ಎಂದು ಟೀಕಿಸಿದರು.</p>.<p>ಈಚೆಗೆ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಇ ಹರಾಜು ಸಂಬಂಧ ನಡೆದ ತರಬೇತಿ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡಲಾಗಿದೆ. ಎಲ್ಲ ಪರವಾನಗಿದಾರರಿಗೆ ಹಾಗೂ ಉದ್ಯಮಿಗಳಿಗೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಸರಿಯಲ್ಲ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಹರಾಜಿನ ಕನಿಷ್ಠ ಮೊತ್ತವನ್ನು ₹ 80 ಲಕ್ಷಕ್ಕೆ ನಿಗದಿ ಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇ ಹರಾಜು ಪ್ರಕ್ರಿಯೆಯಿಂದ ದೇಶದ ಯಾವುದೇ ಭಾಗದ ಉದ್ಯಮಿಗಳು ಭಾಗವಹಿಸಲು ಅವಕಾಶ ಇರುವುದರಿಂದ ಸ್ಥಳೀಯರು ಅವಕಾಶ ವಂಚಿರಾಗಲಿದ್ದಾರೆ. ಮದ್ಯದಂಗಡಿಗಳಲ್ಲಿ ಹೊರ ರಾಜ್ಯದವರಿಗೆ ಕೆಲಸ ಸಿಗುತ್ತದೆ ಎಂದು ಆರೋಪಿಸಿದರು.</p>.<p>ಅಬಕಾರಿ ಸನ್ನದು ಹಂಚಿಕೆಯಲ್ಲಿ ಮೀಸಲಾತಿ ತಂದಿರುವುದು ಸ್ವಾಗತಾರ್ಹವಾದರೂ ಜಿಲ್ಲಾವಾರು ಮೀಸಲಾತಿ ಜಾರಿಗೊಳಿಸದಿರುವುದರಿಂದ ಉಳ್ಳವರಿಗೆ ಅನುಕೂಲವಾಗಲಿದೆ. ಹಾಗಾಗಿ ಜಿಲ್ಲಾವಾರು ಮೀಸಲಾತಿ ನಿಗದಿಪಡಿಸಿ ಪರವಾನಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮನೋಜ್ ಪಟೇಲ್, ಬಂಗಾರ ನಾಯಕ, ಮಹೇಶ್ ಪ್ರಸಾದ್, ರಾಮಸಮುದ್ರ ಶಿವಣ್ಣ, ಕೂಸಣ್ಣ, ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>