<p><strong>ಹನೂರು:</strong> ಹುಲಿಗಳ ಸರಣಿ ಸಾವು, ರೈತರ ಬೆಳೆ ನಾಶ, ಪರಿಹಾರ ವಿಳಂಬ, ಹೆಚ್ಚಾದ ಮಾನವ ಪ್ರಾಣಿ ಸಂಘರ್ಷದಂತಹ ಪ್ರಕರಣಗಳಿಂದ ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಹೆಚ್ಚಾಗಿದ್ದ ಅಂತರವನ್ನು ತಗ್ಗಿಸಲು, ಅರಣ್ಯ ಇಲಾಖೆಯು ‘ಜನವನ ಸೇತುವೆ’ ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿದೆ.</p>.<p>ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಒಳಗಿರುವ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಗ್ರಾಮದಿಂದ ಶಾಲೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ವಿದ್ಯಾರ್ಥಿಗಳನ್ನು ವಾಹನದಲ್ಲಿ ಶಾಲೆಗೆ ಕರೆದೊಯ್ಯಲಾಗುವುದು ಹಾಗೂ ಮರಳಿ ಗ್ರಾಮಕ್ಕೆ ಕರೆತರಲಾಗುವುದು. ಈ ವಿಭಿನ್ನ ಕಾರ್ಯಕ್ರಮಕ್ಕೆ ನ.9ರಂದು ಅಧಿಕೃತ ಚಾಲನೆ ದೊರೆಯಲಿದೆ.</p>.<p>ವನ್ಯದಾಮದಲ್ಲಿ ಹುಲಿಗಳ ಸರಣಿ ಸಾವಿನ ಬಳಿಕ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಬಂಧ ಪೂರಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾದ ಅಧಿಕಾರಿಗಳು ಗ್ರಾಮಗಳಲ್ಲಿ ನಿರಂತರ ಸಭೆಗಳನ್ನು ನಡೆಸಿದ್ದರು.</p>.<p>‘ಗ್ರಾಮಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಹಾಗೂ ಜನ ವನ ಸೇತುವೆ ಸಾರಿಗೆ ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ ಮೊದಲ ಹೆಜ್ಜೆಯಾಗಿ ಪಚ್ಚೆ ದೊಡ್ಡಿ ಗ್ರಾಮಕ್ಕೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<p>‘ಗ್ರಾಮದಿಂದ ಅಜ್ಜೀಪುರ ಶಾಲೆಗೆ ತೆರಳುತ್ತಿರುವ 13 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನದ ಸೇವೆ ದೊರೆಯಲಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಎಲ್ಲರಿಗೂ ಸೌಲಭ್ಯ ಸಿಗಲಿ:</strong></p>.<p>2020-21ರಲ್ಲಿ ಜನ-ವನ ಸೇತುವೆ ಸಾರಿಗೆ ಕಾರ್ಯಕ್ರಮ ಅನುಷ್ಠಾನಗೊಂಡಿತ್ತು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಕಾಡಂಚಿನ ಜನರಿಗೂ ವಾಹನದ ಸೌಲಭ್ಯ ದೊರೆಯುತ್ತಿತ್ತು. ವೃದ್ಧರು, ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗಳಿಗೆ ತೆರಳು, ಪಟ್ಟಣಗಳಿಂದ ದಿನನಿತ್ಯದ ಆಹಾರ ಪದಾರ್ಥ ಹಾಗೂ ಮನೆಯ ಸಾಮಾಗ್ರಿಗಳನ್ನು ತರಲು ಜನ-ವನ ಸಾರಿಗೆ ಉಪಯುಕ್ತವಾಗಿತ್ತು.</p>.<p>‘ಗ್ರಾಮ ಹಾಗೂ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ಬಿಡಲಾಗಿದ್ದ 3 ವಾಹನಗಳಿಂದ ಸ್ಥಳೀಯರಿಗೆ ಅನುಕೂಲವಾಗಿತ್ತು. ಆದರೆ, ನಂತರ ನಿರ್ವಹಣೆ ಕೊರತೆಯಿಂದಾಗಿ ಸೇವೆ ಸ್ಥಗಿತವಾಗಿತ್ತು. ವಿವಿಧ ಇಲಾಖೆಗಳಿಗೆ ನಿಯೋಜಿಸಿದ್ದ ವಾಹನಗಳನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆದು ಕಾಡಂಚಿನ ಜನರ ಬಳಕೆಗೆ ಬಿಡಬೇಕು’ ಎಂದು ಒತ್ತಾಯಿಸುತ್ತಾರೆ ಕಾಂಚಳ್ಳಿ ಗ್ರಾಮದ ಜಡೇಸ್ವಾಮಿ ಮತ್ತು ಪಚ್ಚೆದೊಡ್ಡಿ ಗ್ರಾಮದ ನಾರಾಯಣಗೌಡ.</p>.<p><strong>ಸಫಾರಿ ವಾಹನ ಬಳಕೆ:</strong></p>.<p>‘ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ಜೊತೆಗೆ ಅರಣ್ಯವಾಸಿಗಳ ರಕ್ಷಣೆಯೂ ಆದ್ಯತೆಯ ವಿಚಾರ. ಸಫಾರಿಗೆ ಬಳಸುತ್ತಿದ್ದ ವಾಹನಗಳನ್ನು ಮಕ್ಕಳಿಗಾಗಿ ಬಳಸಲು ತೀರ್ಮಾನಿಸಿದ್ದೇವೆ’ ಎನ್ನುತ್ತಾರೆ ಹನೂರು ಬಫರ್ ವಲಯದ ವಲಯ ಅರಣ್ಯಾಧಿಕಾರಿ ಕೆ.ಎಂ.ನಾಗರಾಜು.<br><br></p>.<div><blockquote>‘ತಾತ್ಕಾಲಿಕವಾಗಿ ಸಫಾರಿ ವಾಹನ’ ಜನ-ವನ ಸೇತುವೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದ ವಾಹನಗಳು ಬೇರೆ ಬೇರೆ ಇಲಾಖೆಯಲ್ಲಿ ಇರುವುದರಿಂದ ಅವುಗಳನ್ನು ಇಲಾಖೆಯ ವಶಕ್ಕೆ ಪಡೆಯಲು ಕಾಲಾವಕಾಶ ಬೇಕು. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಸಫಾರಿ ವಾಹನವನ್ನೇ ಬಳಸುತ್ತೇವೆ. </blockquote><span class="attribution">–ಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ</span></div>.<p><strong>ವರದಿ ಪರಿಣಾಮ</strong> </p><p>ವನ್ಯಜೀವಿಗಳ ಸರಣಿ ಸಾವು ಮಾನವ ಪ್ರಾಣಿ ಸಂಘರ್ಷದಿಂದ ಅರಣ್ಯ ಇಲಾಖೆ ಹಾಗೂ ಕಾಡಂಚಿನ ನಿವಾಸಿಗಳ ನಡುವೆ ಕಂದಕ ಸೃಷ್ಟಿಯಾಗಿರುವ ಹಾಗೂ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಎದುರಾಗಿರುವ ಕುರಿತು ಅ.10 ರಂದು ‘ಮರು ಆರಂಭವಾಗಲಿ ಜನ-ವನ ಸೇತುವೆ’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಗಮನ ಸಳೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು:</strong> ಹುಲಿಗಳ ಸರಣಿ ಸಾವು, ರೈತರ ಬೆಳೆ ನಾಶ, ಪರಿಹಾರ ವಿಳಂಬ, ಹೆಚ್ಚಾದ ಮಾನವ ಪ್ರಾಣಿ ಸಂಘರ್ಷದಂತಹ ಪ್ರಕರಣಗಳಿಂದ ಕಾಡಂಚಿನ ನಿವಾಸಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಹೆಚ್ಚಾಗಿದ್ದ ಅಂತರವನ್ನು ತಗ್ಗಿಸಲು, ಅರಣ್ಯ ಇಲಾಖೆಯು ‘ಜನವನ ಸೇತುವೆ’ ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿದೆ.</p>.<p>ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಒಳಗಿರುವ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಗ್ರಾಮದಿಂದ ಶಾಲೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ವಿದ್ಯಾರ್ಥಿಗಳನ್ನು ವಾಹನದಲ್ಲಿ ಶಾಲೆಗೆ ಕರೆದೊಯ್ಯಲಾಗುವುದು ಹಾಗೂ ಮರಳಿ ಗ್ರಾಮಕ್ಕೆ ಕರೆತರಲಾಗುವುದು. ಈ ವಿಭಿನ್ನ ಕಾರ್ಯಕ್ರಮಕ್ಕೆ ನ.9ರಂದು ಅಧಿಕೃತ ಚಾಲನೆ ದೊರೆಯಲಿದೆ.</p>.<p>ವನ್ಯದಾಮದಲ್ಲಿ ಹುಲಿಗಳ ಸರಣಿ ಸಾವಿನ ಬಳಿಕ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಬಂಧ ಪೂರಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾದ ಅಧಿಕಾರಿಗಳು ಗ್ರಾಮಗಳಲ್ಲಿ ನಿರಂತರ ಸಭೆಗಳನ್ನು ನಡೆಸಿದ್ದರು.</p>.<p>‘ಗ್ರಾಮಗಳಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಹಾಗೂ ಜನ ವನ ಸೇತುವೆ ಸಾರಿಗೆ ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ ಮೊದಲ ಹೆಜ್ಜೆಯಾಗಿ ಪಚ್ಚೆ ದೊಡ್ಡಿ ಗ್ರಾಮಕ್ಕೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.</p>.<p>‘ಗ್ರಾಮದಿಂದ ಅಜ್ಜೀಪುರ ಶಾಲೆಗೆ ತೆರಳುತ್ತಿರುವ 13 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನದ ಸೇವೆ ದೊರೆಯಲಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<p><strong>ಎಲ್ಲರಿಗೂ ಸೌಲಭ್ಯ ಸಿಗಲಿ:</strong></p>.<p>2020-21ರಲ್ಲಿ ಜನ-ವನ ಸೇತುವೆ ಸಾರಿಗೆ ಕಾರ್ಯಕ್ರಮ ಅನುಷ್ಠಾನಗೊಂಡಿತ್ತು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಕಾಡಂಚಿನ ಜನರಿಗೂ ವಾಹನದ ಸೌಲಭ್ಯ ದೊರೆಯುತ್ತಿತ್ತು. ವೃದ್ಧರು, ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗಳಿಗೆ ತೆರಳು, ಪಟ್ಟಣಗಳಿಂದ ದಿನನಿತ್ಯದ ಆಹಾರ ಪದಾರ್ಥ ಹಾಗೂ ಮನೆಯ ಸಾಮಾಗ್ರಿಗಳನ್ನು ತರಲು ಜನ-ವನ ಸಾರಿಗೆ ಉಪಯುಕ್ತವಾಗಿತ್ತು.</p>.<p>‘ಗ್ರಾಮ ಹಾಗೂ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ಬಿಡಲಾಗಿದ್ದ 3 ವಾಹನಗಳಿಂದ ಸ್ಥಳೀಯರಿಗೆ ಅನುಕೂಲವಾಗಿತ್ತು. ಆದರೆ, ನಂತರ ನಿರ್ವಹಣೆ ಕೊರತೆಯಿಂದಾಗಿ ಸೇವೆ ಸ್ಥಗಿತವಾಗಿತ್ತು. ವಿವಿಧ ಇಲಾಖೆಗಳಿಗೆ ನಿಯೋಜಿಸಿದ್ದ ವಾಹನಗಳನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆದು ಕಾಡಂಚಿನ ಜನರ ಬಳಕೆಗೆ ಬಿಡಬೇಕು’ ಎಂದು ಒತ್ತಾಯಿಸುತ್ತಾರೆ ಕಾಂಚಳ್ಳಿ ಗ್ರಾಮದ ಜಡೇಸ್ವಾಮಿ ಮತ್ತು ಪಚ್ಚೆದೊಡ್ಡಿ ಗ್ರಾಮದ ನಾರಾಯಣಗೌಡ.</p>.<p><strong>ಸಫಾರಿ ವಾಹನ ಬಳಕೆ:</strong></p>.<p>‘ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ಜೊತೆಗೆ ಅರಣ್ಯವಾಸಿಗಳ ರಕ್ಷಣೆಯೂ ಆದ್ಯತೆಯ ವಿಚಾರ. ಸಫಾರಿಗೆ ಬಳಸುತ್ತಿದ್ದ ವಾಹನಗಳನ್ನು ಮಕ್ಕಳಿಗಾಗಿ ಬಳಸಲು ತೀರ್ಮಾನಿಸಿದ್ದೇವೆ’ ಎನ್ನುತ್ತಾರೆ ಹನೂರು ಬಫರ್ ವಲಯದ ವಲಯ ಅರಣ್ಯಾಧಿಕಾರಿ ಕೆ.ಎಂ.ನಾಗರಾಜು.<br><br></p>.<div><blockquote>‘ತಾತ್ಕಾಲಿಕವಾಗಿ ಸಫಾರಿ ವಾಹನ’ ಜನ-ವನ ಸೇತುವೆ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದ ವಾಹನಗಳು ಬೇರೆ ಬೇರೆ ಇಲಾಖೆಯಲ್ಲಿ ಇರುವುದರಿಂದ ಅವುಗಳನ್ನು ಇಲಾಖೆಯ ವಶಕ್ಕೆ ಪಡೆಯಲು ಕಾಲಾವಕಾಶ ಬೇಕು. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಸಫಾರಿ ವಾಹನವನ್ನೇ ಬಳಸುತ್ತೇವೆ. </blockquote><span class="attribution">–ಭಾಸ್ಕರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ</span></div>.<p><strong>ವರದಿ ಪರಿಣಾಮ</strong> </p><p>ವನ್ಯಜೀವಿಗಳ ಸರಣಿ ಸಾವು ಮಾನವ ಪ್ರಾಣಿ ಸಂಘರ್ಷದಿಂದ ಅರಣ್ಯ ಇಲಾಖೆ ಹಾಗೂ ಕಾಡಂಚಿನ ನಿವಾಸಿಗಳ ನಡುವೆ ಕಂದಕ ಸೃಷ್ಟಿಯಾಗಿರುವ ಹಾಗೂ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಎದುರಾಗಿರುವ ಕುರಿತು ಅ.10 ರಂದು ‘ಮರು ಆರಂಭವಾಗಲಿ ಜನ-ವನ ಸೇತುವೆ’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಗಮನ ಸಳೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>