ಕೂಡಲೂರು, ದೊಮ್ಮೆಗೌಡನ ದೊಡ್ಡಿ ಶಾಲೆಗಳಲ್ಲಿ ಕಾoಪೌಂಡ್ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೂಡಲೂರು ಶಾಲೆಗೆ ಗೇಟ್ ಹಾಕಬೇಕು. ದೊಮ್ಮೆಗೌಡನ ದೊಡ್ಡಿ ಶಾಲೆಯಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೂಗ್ಯಂ ಕೇಂದ್ರ ಶಾಲೆಯಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸಲು ಜಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಮುಂದೆ ಕಾಮಗಾರಿಯೇ ಆರಂಭವಾಗಿಲ್ಲ. ಹಲವು ತಿಂಗಳಿಂದ ಜಲ್ಲಿಕಲ್ಲಿನ ರಾಶಿಯಿಂದಲೇ ಆವರಣ ತುಂಬಿ ಹೋಗಿದೆ. ಕಾಮಗಾರಿ ಮುಗಿಸದಿದ್ದರೆ ಆವರಣ ತುಂಬೆಲ್ಲ ರಾಶಿ ಕಲ್ಲು ಹಾಕಿರುವುದು ಏತಕ್ಕಾಗಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.