<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಪಾರ್ವತಾಂಬೆ ದೇವಾಲಯದ ಮೊದಲ ವರ್ಷದ ಆರಾಧನೆ ಮಹೋತ್ಸವ ಪ್ರಯುಕ್ತ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<p> ಶ್ರೀ ಅಲ್ಲಹಳ್ಳಿ ಪಾರ್ವತಾಂಬೆಗೆ ಸ್ವರ್ಣಕಲ್ಲಿನ ದೇವಾಲಯ ಮತ್ತು ಗ್ರಾಮವನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರಿಂದ ಪ್ರಸಾದ ವಿನಿಯೋಗ ಮಾಡಿದರು. </p>.<p>ಹಳ್ಳಿಕಾರ್ ಎತ್ತುಗಳ ಪ್ರದರ್ಶನ: ಹಸಗೂಲಿ ಗ್ರಾಮದ ಜಾತ್ರೆ ಮಾಳದಲ್ಲಿ ಬೆಂಗಳೂರಿನ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಹಳ್ಳಿಕಾರ್ ಎತ್ತುಗಳ ಪ್ರದರ್ಶನ ಏರ್ಪಡಿಸಿದ್ದರು. ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಪ್ರದರ್ಶನ ಸಾನಿಧ್ಯ ವಹಿಸಿದ್ದರು.</p>.<p> ಹಳ್ಳಿಕಾರ್ ಜೋಡೆತ್ತುಗಳನ್ನು ವೀಕ್ಷಿಸಿದ ವರ್ತೂರ್ ಸಂತೋಷ್ ನಂತರ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ನಡೆಯುವ ಅನ್ನದಾನಕ್ಕೆ ನಾನು ಸಹಕಾರ ನೀಡುತ್ತೇನೆ ಭರವಸೆ ನೀಡಿದರು.</p>.<p>78 ಜೋಡಿ ಹಳ್ಳಿಕಾರ್ ಎತ್ತುಗಳನ್ನು ಪ್ರದರ್ಶಿಸಲಾಯಿತು. ವಿಜೇತರಾದ ಹಳ್ಳಿಕಾರ್ ಜೋಡೆತ್ತುಗಳ ಮಾಲೀಕರಿಗೆ ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ ಮತ್ತು ತೃತೀಯ ₹10 ಸಾವಿರ ನಗದು ಬಹುಮಾನ ಮತ್ತು ಸಮಾಧಾನಕರ ಬಹುಮಾನ ನೀಡ ಲಾಯಿತು.</p>
<p><strong>ಗುಂಡ್ಲುಪೇಟೆ:</strong> ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಪಾರ್ವತಾಂಬೆ ದೇವಾಲಯದ ಮೊದಲ ವರ್ಷದ ಆರಾಧನೆ ಮಹೋತ್ಸವ ಪ್ರಯುಕ್ತ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.</p>.<p> ಶ್ರೀ ಅಲ್ಲಹಳ್ಳಿ ಪಾರ್ವತಾಂಬೆಗೆ ಸ್ವರ್ಣಕಲ್ಲಿನ ದೇವಾಲಯ ಮತ್ತು ಗ್ರಾಮವನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಮತ್ತು ದೇವಾಲಯ ಸಮಿತಿಯವರಿಂದ ಪ್ರಸಾದ ವಿನಿಯೋಗ ಮಾಡಿದರು. </p>.<p>ಹಳ್ಳಿಕಾರ್ ಎತ್ತುಗಳ ಪ್ರದರ್ಶನ: ಹಸಗೂಲಿ ಗ್ರಾಮದ ಜಾತ್ರೆ ಮಾಳದಲ್ಲಿ ಬೆಂಗಳೂರಿನ ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ಬಸವರಾಜು ಹಳ್ಳಿಕಾರ್ ಎತ್ತುಗಳ ಪ್ರದರ್ಶನ ಏರ್ಪಡಿಸಿದ್ದರು. ಮೂಡುಗೂರು ಇಮ್ಮಡಿ ಉದ್ದಾನ ಸ್ವಾಮೀಜಿ ಪ್ರದರ್ಶನ ಸಾನಿಧ್ಯ ವಹಿಸಿದ್ದರು.</p>.<p> ಹಳ್ಳಿಕಾರ್ ಜೋಡೆತ್ತುಗಳನ್ನು ವೀಕ್ಷಿಸಿದ ವರ್ತೂರ್ ಸಂತೋಷ್ ನಂತರ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ನಡೆಯುವ ಅನ್ನದಾನಕ್ಕೆ ನಾನು ಸಹಕಾರ ನೀಡುತ್ತೇನೆ ಭರವಸೆ ನೀಡಿದರು.</p>.<p>78 ಜೋಡಿ ಹಳ್ಳಿಕಾರ್ ಎತ್ತುಗಳನ್ನು ಪ್ರದರ್ಶಿಸಲಾಯಿತು. ವಿಜೇತರಾದ ಹಳ್ಳಿಕಾರ್ ಜೋಡೆತ್ತುಗಳ ಮಾಲೀಕರಿಗೆ ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ ಮತ್ತು ತೃತೀಯ ₹10 ಸಾವಿರ ನಗದು ಬಹುಮಾನ ಮತ್ತು ಸಮಾಧಾನಕರ ಬಹುಮಾನ ನೀಡ ಲಾಯಿತು.</p>