‘ಇತ್ತೀಚಿನ ದಿನಗಳಲ್ಲಿ ರೈತರ ಸಮಸ್ಯೆ ಬಗೆಹರಿಸುವ ನಾಯಕರು ಕಡಿಮೆಯಾಗುತ್ತಿದ್ದಾರೆ. ಸಮಸ್ಯೆ ಎದುರಾದರೆ ಪ್ರತಿಭಟನೆಗೆ ಅಷ್ಟೇ ಸೀಮಿತವಾಗಿದೆ. ಸ್ವತಃ ರೈತನಾಗಿರುವ ನನಗೆ ಸಮಸ್ಯೆ ಬಗ್ಗೆ ಅರಿವಿದೆ. ನಮ್ಮ ಸಮಸ್ಯೆ ಮತ್ತು ಬೇಡಿಕೆಯನ್ನು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ತಿಳಿಸುವ ಸಲುವಾಗಿ ಇಬ್ಬರೂ ಸ್ಪರ್ಧಿಸಲು ನಿರ್ಧರಿಸಿದ್ದೇವೆ’ ಎಂದು ಸಂಪತ್ತು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.