ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಮಹದೇಶ್ವರ ಬೆಟ್ಟದಲ್ಲಿ ಆನೆ ದಾಳಿ: ವ್ಯಕ್ತಿಗೆ ಗಾಯ

Last Updated 15 ಡಿಸೆಂಬರ್ 2022, 6:19 IST
ಅಕ್ಷರ ಗಾತ್ರ

ಹನೂರು (ಚಾಮರಾಜನಗರ): ತಾಲ್ಲೂಕಿನ ಮಹದೇಶ್ವರ ಬೆಟ್ಟ ಸಮೀಪದ ಕೊಕ್ಬರೆ ಗ್ರಾಮದ ಪುಟ್ಟಯ್ಯ ಎಂಬುವವರು ಕಾಡಾನೆ ದಾಳಿಗೆ ತುತ್ತಾಗಿಗಾಯಗೊಂಡಿದ್ದಾರೆ.

ಬುಧವಾರ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಕಾಡಾನೆಯೊಂದು ಏಕಾಏಕಿ ಪುಟ್ಟಯ್ಯ ಮೇಲೆ ದಾಳಿ ಮಾಡಿದೆ. ಅವರ ಕಾಲು ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ತೀವ್ರ ಗಾಯಗಳಾಗಿದ್ದು, ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕರಡಿ ದಾಳಿ ದನಗಾಹಿಗೆ ಗಾಯ:

ತಾಲ್ಲೂಕಿನ‌ ಮಾರ್ಟಳ್ಳಿ ಸಮೀಪದ ಕಡಬೂರು ಗ್ರಾಮದಲ್ಲಿ ಬೆಳ್ಳಿತಂಬಡಿ ಎಂಬುವವರ ಮೇಲೆ ಕರಡಿಯೊಂದು ಬುಧವಾರ ಸಂಜೆ ದಾಳಿ ಮಾಡಿದೆ.ಕಡಬೂರು ಗ್ರಾಮದ ಸುತ್ತಮುತ್ತ ದನಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಬೆಳ್ಳಿ ತಂಬಡಿ ಅವರ ಮೇಲೆ ಕರಡಿ ದಾಳಿ ಮಾಡಿದೆ.

ತೀವ್ರವಾಗಿ ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT