ಒಂದು ವಾರದಿಂದ ಮಣ್ಣಿನ ಮಡಿಕೆಯಲ್ಲಿ ಕಾದಿದ್ದ ಅಗ್ನಿ ಕುಂಡವನ್ನು ಪೂಜೆ ಸಲ್ಲಿಸಿ ಪ್ರಧಾನ ಅರ್ಚಕರು ಪ್ರಾತಕಾಲದಲ್ಲಿ ಬರಿಗೈಯಲ್ಲಿ ಎತ್ತುವ ಮೂಲಕ ನೆರೆದಿದ್ದ ಭಕ್ತರನ್ನು ಮೂಖ ಪ್ರೇಕ್ಷಕರನ್ನಾಗಿ ಮಾಡಿದರು. ನಂತರ ಅಗ್ನಿ ಕುಂಡವನ್ನು ತೊಡೆಯ ಮೇಲೆ ಇಟ್ಟುಕೊಂಡು ‘ಈ ಬಾರಿ ಮುಂಗಾರು ಮಳೆ ನಾಲ್ಕು ಕಡಿಮೆ, ಎಂಟಾಣೆ ಬೆಳೆಯಾಗುವುದು, ಮುಂಗಾರು ಮಳೆ ಎರಡು ಕಡಿಮೆ ಹನ್ನೆರಡಾಣೆ ಬೆಳೆಯಾಗುತ್ತದೆ. ದೇವಿಯ ನಂಬಿರುವ ಭಕ್ತರ ಹಾಗೂ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನತೆ ಯಾವುದೇ ರೋಗರುಜಿನಗಳು ಬರದಂತೆ ದೇವಿ ತಡೆಗಟ್ಟುವುದಾಗಿ’ ವಾಗ್ದಾನ ನೀಡಿದರು.