‘ಪ್ರತಿ ನಿತ್ಯ ಶಾಲಾ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನಗಳನ್ನು ಓಡಿಸಲಾಗುತ್ತಿದೆ. ಉಳಿದ ಸಮಯದಲ್ಲಿ ತುರ್ತು ಸಂದರ್ಭ ಹಾಗೂ ವಯೋ ವೃದ್ದರು ಮಹದೇಶ್ವರ ಬೆಟ್ಟಕ್ಕೆ ಸಂಚರಿಸುವ ಸಮಯದಲ್ಲಿ ವಾಹನವನ್ನು ಬಳಸಿಕೊಳ್ಳಬಹುದು ಈಗಾಗಲೇ ಇಂಡಿಗನತ್ತ ಹಾಗೂ ತೊಳಸಿಕೆರೆ ಗ್ರಾಮಗಳಿಗೆ ಸಂಚಾರವನ್ನು ಪ್ರಾರಂಭಿಸಲಾಗಿದ್ದು, ಈ ಭಾಗದ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುತಿದ್ದು, ಮುಂದಿನ ದಿನಗಳಲ್ಲಿ ಮೆದಗನಾಣೆ, ದೊಡ್ಡಾಣೆ ಗ್ರಾಮಗಳಿಗೂ ಸಂಚಾರ ಪ್ರಾರಂಭಿಸಲಾಗುವುದು’ ಎಂದು ಸರಸ್ವತಿಯವರು ‘ಪ್ರಜಾವಾಣಿ’ಗೆ ತಿಳಿಸಿದರು.