ನನ್ನ ಮತ ನನಗೇ ಹಾಕಿಕೊಳ್ಳುವೆ’
‘‘2014ರಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಈಗ ರಾಜಕಾರಣ ಚುನಾವಣೆ ಎಂದರೆ ಶ್ರೀಮಂತರು ರಾಜಕಾರಣಿಗಳ ಕುಟುಂಬದವರಿಗೆ ಸೀಮಿತ ಎಂಬಂತಾಗಿದೆ. ಬಡವರ ಮಕ್ಕಳು ಸ್ಪರ್ಧಿಸಬೇಕು ಎಂಬ ಉದ್ದೇಶದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳುತ್ತಾರೆ ಹನೂರಿನ ಪ್ರದೀಪ್ ಕುಮಾರ್. ‘ಶಾಸಕರು ಸಂಸದರಾಗಿ ಆಯ್ಕೆಯಾದವರು ಭರವಸೆಗಳನ್ನು ಈಡೇರಿಸುವುದಿಲ್ಲ. ಗೆದ್ದ ಮೇಲೆ ಮತದಾರರು ಕ್ಷೇತ್ರದತ್ತ ತಲೆ ಹಾಕುವುದಿಲ್ಲ. ಅಂತಹವರಿಗೆ ನಾನು ಮತ ಹಾಕಬಾರದು. ನನ್ನ ಮತವನ್ನು ನಾನೇ ಹಾಕಿಕೊಳ್ಳಬೇಕು ಎಂಬ ನಿಲುವು ನನ್ನದು’ ಎಂದರು. ಸಾಮಾನ್ಯವಾಗಿ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳನ್ನು ಖರೀದಿ ಮಾಡುತ್ತಾರೆ. ಆದರೆ ನಾನು ಅದಕ್ಕಾಗಿ ನಿಂತಿಲ್ಲ. ಆಮಿಷ ಬೆದರಿಕೆಗೆ ಜಗ್ಗದೇ ಸ್ಪರ್ಧೆ ಮಾಡುತ್ತಿದ್ದೇನೆ’ ಎಂದು ಪ್ರದೀಪ್ ಕುಮಾರ್ ಹೇಳಿದರು.