ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜು, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಮಗೆ ಒಪ್ಪಿಸಿರಲಿಲ್ಲ. ಕೆಲ ದಿನಗಳವರೆಗೆ ಮಾತ್ರ ದೀಪಗಳು ಉರಿಯುತ್ತಿದ್ದವು. ಕಳಪೆ ಗುಣಮಟ್ಟದ ವೈರ್ಗಳನ್ನು ಬಳಕೆ ಮಾಡಿರುವುದರಿಂದ ಅನೇಕ ಕಡೆಗಳಲ್ಲಿ ವೈರ್ ತುಂಡಾಗುತ್ತಿದೆ. ಅದನ್ನು ಹೊಸದಾಗಿ ಮಾಡಲು ಅನುದಾನ ಬೇಕಿದೆ. ಪುರಸಭೆಯಿಂದ ಈಗಾಗಲೇ ರಿಪೇರಿ ಮಾಡಿ ದೀಪಗಳು ಉರಿಯುವಂತೆ ಮಾಡಿದ್ದೆವು. ಈಗ ಮತ್ತೆ ಸಮಸ್ಯೆಯಾಗಿದೆ. ಕೌನ್ಸಿಲ್ನಲ್ಲಿ ಈ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಂಡು, ಬೀದಿ ದೀಪ ಸರಿಪಡಿಸಲು ಕ್ರಮವಹಿಸಲಾಗುವುದು’ ಎಂದರು.