ತಾಲ್ಲೂಕಿನಲ್ಲಿ ಎಲ್ಲಿ, ಏನು ಅಕ್ರಮ ನಡೆಯುತ್ತದೆ ಎಂಬುದು ಎಲ್ಲ ಠಾಣೆಯ ಗುಪ್ತ ಮಾಹಿತಿ ಸಂಗ್ರಹ ಮಾಡುವ ಸಿಬ್ಬಂದಿ ಗಮನಕ್ಕೆ ಬರುತ್ತದೆ. ಆದರೆ, ಕ್ರಮ ಕೈಗೊಳ್ಳುತ್ತಿಲ್ಲ. ಇವರ ವೈಫಲ್ಯದಿಂದಾಗಿ ತಾಲ್ಲೂಕಿನಾದ್ಯಂತ ಇಸ್ಪೀಟ್, ಮದ್ಯದಅಕ್ರಮ ಮಾರಾಟ, ಪಡಿತರ ಅಕ್ಕಿ ಮಾರಾಟ ಮತ್ತು ಲಾಟರಿ ದಂಧೆಗಳು ನಡೆಯುತ್ತಲೇ ಇವೆ. ಮಾದ್ಯಮಗಳಲ್ಲಿ ಸುದ್ದಿಯಾದಾಗ ಕೆಲವರನ್ನು ಬಂಧಿಸುತ್ತಾರೆ. ಕೆಲವು ದಿನಗಳ ನಂತರ ದಂಧೆ ಮತ್ತೆ ಆರಂಭವಾಗುತ್ತದೆ’ ಎಂದು ಪುರಸಭೆ ಸದಸ್ಯ ರಾಜ್ ಗೋಪಾಲ್ ಆರೋಪಿಸಿದರು.