<p><strong>ಚಾಮರಾಜನಗರ:</strong> ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಗಿದೆ. </p>.<p>ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಗಿದೆ. ಸಂಜೆ 4.30ಕ್ಕೆ ಆರಂಭಗೊಂಡ ಮಳೆ ಆರು ಗಂಟೆಯವರೆಗೂ ಸುರಿಯಿತು. ಆ ಬಳಿಕವೂ ಬಿಟ್ಟು ಬಿಟ್ಟು ಮಳೆಯಾಯಿತು. </p>.<p>ಹಲವು ದಿನಗಳ ನಂತರ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು. </p>.<p>ಬಿರುಸಿನ ಮಳೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೀರು ಕಟ್ಟಿಕೊಳ್ಳುವ ಸಮಸ್ಯೆ ಮರುಕಳಿಸಿತು. ಇತ್ತೀಚೆಗಷ್ಟೇ, ರಾಜಕಾಲುವೆಗೆ ಅಡ್ಡಲಾಗಿದ್ದ ಕಾವೇರಿ ನೀರಿನ ಪೈಪ್ ಅನ್ನು ₹11 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಲಾಗಿತ್ತು. ಹಾಗಿದ್ದರೂ, ಗುರುವಾರ ಸಂಜೆ, ರಾಜಕಾಲುವೆ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಯ ಸೆಸ್ಕ್ ಕಚೇರಿ ಮುಂಭಾಗದ ಚರಂಡಿ ಕಟ್ಟಿಕೊಂಡು ನೀರು ರಸ್ತೆಗೆ ಉಕ್ಕಿತು. ಜನರು ಓಡಾಡಲು ತೊಂದರೆ ಅನುಭವಿಸಿದರು. </p>.<p>ನಗರಸಭೆ ತಕ್ಷಣವೇ ಜೆಸಿಬಿ ಮೂಲಕ ಚರಂಡಿಯಲ್ಲಿ ಕಟ್ಟಿಕೊಂಡ ಕಸ, ಕಡ್ಡಿ, ಪ್ಲಾಸ್ಟಿಕ್ಗಳನ್ನು ತೆರವುಗೊಳಿಸಿತಾದರೂ, ನೀರಿನ ಪ್ರಮಾಣ ಹೆಚ್ಚಿದ್ದುದರಿಂದ ನೀರು ಉಕ್ಕಿ ಹರಿಯುವುದು ನಿಲ್ಲಲಿಲ್ಲ. </p>.<p>ಜನರಿಗೆ ಅಡಚಣೆ: ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಜನರು ಅದರಲ್ಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮನೆಗೆ ಮರಳಲು ತೊಂದರೆ ಅನುಭವಿಸಿದರು. ಮಕ್ಕಳು ಮಳೆಯಲ್ಲಿ ನೆನೆದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು. </p>.<p>ಸಂಜೆ ಹೊತ್ತು ವಸ್ತುಗಳ ಖರೀದಿಗಾಗಿ ನಗರಕ್ಕೆ ಬಂದಿದ್ದ ಗ್ರಾಹಕರು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಳ ಕೆಳಗೆ, ಅಂಗಡಿಗಳು, ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದರು. </p>.<p>ಗೌಡಹಳ್ಳಿ ಸುತ್ತಮುತ್ತ ಮಳೆ: ಯಳಂದೂರು ತಾಲ್ಲೂಕು ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಸುತ್ತಮುತ್ತ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.</p>.<p>ಮುಸುಕಿನ ಜೋಳ, ಟೊಮೆಟೊ, ಮೆಣಸಿನಕಾಯಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಳೆ ತಂಪೆರೆಯಿತು.</p>.<p>ದಿನವಿಡೀ ಬಿಸಿಲು ಹಾಗೂ ಉಷ್ಣಾಂಶದಲ್ಲಿ ಏರಿಕೆ ಇತ್ತು. ಬಿಳಿಗಿರಿರಂಗನ ಬೆಟ್ಟದಲ್ಲಿ ತುಂತುರು ಮಳೆಯಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಬಿರುಸಿನ ಮಳೆಯಾಗಿದೆ. </p>.<p>ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಗಿದೆ. ಸಂಜೆ 4.30ಕ್ಕೆ ಆರಂಭಗೊಂಡ ಮಳೆ ಆರು ಗಂಟೆಯವರೆಗೂ ಸುರಿಯಿತು. ಆ ಬಳಿಕವೂ ಬಿಟ್ಟು ಬಿಟ್ಟು ಮಳೆಯಾಯಿತು. </p>.<p>ಹಲವು ದಿನಗಳ ನಂತರ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು. </p>.<p>ಬಿರುಸಿನ ಮಳೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನೀರು ಕಟ್ಟಿಕೊಳ್ಳುವ ಸಮಸ್ಯೆ ಮರುಕಳಿಸಿತು. ಇತ್ತೀಚೆಗಷ್ಟೇ, ರಾಜಕಾಲುವೆಗೆ ಅಡ್ಡಲಾಗಿದ್ದ ಕಾವೇರಿ ನೀರಿನ ಪೈಪ್ ಅನ್ನು ₹11 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಲಾಗಿತ್ತು. ಹಾಗಿದ್ದರೂ, ಗುರುವಾರ ಸಂಜೆ, ರಾಜಕಾಲುವೆ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಯ ಸೆಸ್ಕ್ ಕಚೇರಿ ಮುಂಭಾಗದ ಚರಂಡಿ ಕಟ್ಟಿಕೊಂಡು ನೀರು ರಸ್ತೆಗೆ ಉಕ್ಕಿತು. ಜನರು ಓಡಾಡಲು ತೊಂದರೆ ಅನುಭವಿಸಿದರು. </p>.<p>ನಗರಸಭೆ ತಕ್ಷಣವೇ ಜೆಸಿಬಿ ಮೂಲಕ ಚರಂಡಿಯಲ್ಲಿ ಕಟ್ಟಿಕೊಂಡ ಕಸ, ಕಡ್ಡಿ, ಪ್ಲಾಸ್ಟಿಕ್ಗಳನ್ನು ತೆರವುಗೊಳಿಸಿತಾದರೂ, ನೀರಿನ ಪ್ರಮಾಣ ಹೆಚ್ಚಿದ್ದುದರಿಂದ ನೀರು ಉಕ್ಕಿ ಹರಿಯುವುದು ನಿಲ್ಲಲಿಲ್ಲ. </p>.<p>ಜನರಿಗೆ ಅಡಚಣೆ: ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಜನರು ಅದರಲ್ಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮನೆಗೆ ಮರಳಲು ತೊಂದರೆ ಅನುಭವಿಸಿದರು. ಮಕ್ಕಳು ಮಳೆಯಲ್ಲಿ ನೆನೆದುಕೊಂಡೇ ಮನೆಯತ್ತ ಹೆಜ್ಜೆ ಹಾಕಿದರು. </p>.<p>ಸಂಜೆ ಹೊತ್ತು ವಸ್ತುಗಳ ಖರೀದಿಗಾಗಿ ನಗರಕ್ಕೆ ಬಂದಿದ್ದ ಗ್ರಾಹಕರು ಮಳೆಯಿಂದ ರಕ್ಷಿಸಿಕೊಳ್ಳಲು ಮರಗಳ ಕೆಳಗೆ, ಅಂಗಡಿಗಳು, ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದರು. </p>.<p>ಗೌಡಹಳ್ಳಿ ಸುತ್ತಮುತ್ತ ಮಳೆ: ಯಳಂದೂರು ತಾಲ್ಲೂಕು ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಸುತ್ತಮುತ್ತ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಗುರುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು.</p>.<p>ಮುಸುಕಿನ ಜೋಳ, ಟೊಮೆಟೊ, ಮೆಣಸಿನಕಾಯಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಳೆ ತಂಪೆರೆಯಿತು.</p>.<p>ದಿನವಿಡೀ ಬಿಸಿಲು ಹಾಗೂ ಉಷ್ಣಾಂಶದಲ್ಲಿ ಏರಿಕೆ ಇತ್ತು. ಬಿಳಿಗಿರಿರಂಗನ ಬೆಟ್ಟದಲ್ಲಿ ತುಂತುರು ಮಳೆಯಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>