‘ಬೆಳಗಾವಿಯಲ್ಲಿರುವ ಪ್ರಧಾನ ಶಾಖೆ ಎರಡು ವರ್ಷಗಳ ಹಿಂದೆಯೇ ಮುಚ್ಚಿದ್ದರೂ, ಅದಿನ್ನೂ ನಡೆಯುತ್ತಿದೆ ಎಂದು ನಂಬಿಸಿ, ಇಲ್ಲಿ ವ್ಯವಹಾರ ನಡೆಸಿದ್ದಾರೆ. ದೊಡ್ಡ ಮಟ್ಟಿನ ವಂಚನೆ ನಡೆಸಿದ್ದರೂ, ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಅನುಮಾನ ಮೂಡುತ್ತಿದೆ. ಹಾಗಾಗಿ, ಹಿರಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ನ್ಯಾಯಸಮ್ಮತ, ಪಾರದರ್ಶಕ ತನಿಖೆ ನಡೆಸಬೇಕು’ ಎಂದು ಮಹದೇವಪ್ಪ ಆಗ್ರಹಿಸಿದರು.