ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಗ್ರಾಮದ ಎಲ್ಲ ಸಮುದಾಯದವರೂ ಭಾಗಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಹಬ್ಬ
ಜನಪದ ತವರು ಕೆಸ್ತೂರು
‘ಹತ್ತೂರು ನೋಡುವುದಕ್ಕಿಂದ ಕೆಸ್ತೂರು ಮಾರಿ ಹಬ್ಬ ನೋಡು’ ಎಂಬ ಮಾತು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ಜನಜನಿತವಾಗಿದೆ. ನಾಡಿನ ಸಂಸ್ಕೃತಿ ಬಿಂಬಿಸುವ ದೊಣ್ಣೆ ವರಸೆ ದೇವತೆ ಜೊತೆ ಸಾಗುವ ಸತ್ತಿಗೆ ಸೂರಿಪಾನಿ ಮೆರವಣಿಗೆ ಹೆಬ್ರೆ ಬಾರಿಸುವವರ ಕರಾಮತ್ತು ಸಾಲಂಕೃತ ಹೆಣ್ಣು ಮಕ್ಕಳ ಹಾಲರವೆ ಮಾರಿ ಕುಣಿತ ಉಯ್ಯಾಲೆಯ ಲಾಸ್ಯ ಬಿದುರು ಕಡಿಯುವಾಟ ಸುಮಂಗಲೆಯರ ತಂಪಿನಾರತಿ ಸಾಗುವಾಗಿನ ಚೆಲುವು ನೋರೆಂಟು ಜನಪದ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಡುತ್ತದೆ. ಗ್ರಾಮದ ನಾಡ ಗೌಡರು ಎಲ್ಲ ಸಮಾಜದ ಯಜಮಾನರು ಒಟ್ಟಾಗಿ ಗ್ರಾಮ ಪರಂಪರೆಯನ್ನು ಯುವ ಜನಾಂಗಕ್ಕೆ ಕಟ್ಟಿಕೊಡುವ ಮೂಲಕ ಹೊಸತನದ ಅರಿವು ಮೂಡಿಸುತ್ತದೆ’ ಎಂದು ಉಪನ್ಯಾಸಕ ಪ್ರಸನ್ನ ಹೇಳಿದರು.