‘ಕೆ.ಟಿ.ನಾಗಶೆಟ್ಟಿ ಮಗ ಮಹೇಂದ್ರ ಅವರು ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇದನ್ನು ಪ್ರಶ್ನಿಸಿದಾಗ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಅಲ್ಲದೇ, ಮಹದೇವ್ ಸಬ್ ಇನ್ಸ್ಪೆಕ್ಟರ್ ಮಹದೇವ್ ಅವರ ಮೇಲೆ ಕಲ್ಲು ಎಸೆದರು. ಇದರಿಂದ ಅವರ ತಲೆಗೆ ಏಟಾಯಿತು. ಚೆನ್ನಿಗ, ಅವರ ತಮ್ಮ ಮಹೇಶ, ನಾಗೇಶ, ಮುರುಗೇಶ, ರಮೇಶ ಅಲಿಯಾಸ್ ರಮ್ಮಿ ಹಾಗೂ ಇತರ 10ರಿಂದ 15 ಮಂದಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ನನಗೆ, ಜೀಪು ಚಾಲಕ ಬಸವರಾಜು ಅವರಿಗೆ ಗಾಯಗಳಾಗಿವೆ’ ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.