ಸಂಜೆ 6.15ಕ್ಕೆ ಘಟನೆ ನಡೆದಿದೆ. ಅಶೋಕ, ಶಾಂತಮಲ್ಲಪ್ಪ ಹಾಗೂ ಅನಿತಾ ಅವರು ಬೈಕ್ನಲ್ಲಿ ನಗರದಿಂದ ಹೆಗ್ಗೊಠಾರ ಗ್ರಾಮಕ್ಕೆ ತೆರಳುತ್ತಿದ್ದರು. ಅಶೋಕ ಅವರು ಬೈಕ್ ಚಲಾಯಿಸುತ್ತಿದ್ದರು. ಕೆಎಸ್ಆರ್ಟಿಸಿ ಬಸ್ ಮೈಸೂರಿನಿಂದ ನಗರಕ್ಕೆ ಬರುತ್ತಿತ್ತು. ಮರಿಯಾಲದ ರೈಲ್ವೆ ಮೇಲ್ಸೇತುವೆ ಮೇಲೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬೈಕ್ನಿಂದ ಬಿದ್ದ ಮೂವರಿಗೂ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.