<p><strong>ಚಾಮರಾಜನಗರ:</strong> ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ಗುರುವಾರ ವನ್ಯಪ್ರಾಣಿ ದಾಳಿಗೆ ಸಿಲುಕಿ ಬುಡಕಟ್ಟು ಸಮುದಾಯದವರೊಬ್ಬರು ಮೃತಪಟ್ಟಿದ್ದಾರೆ. </p>.<p>ಕುಳ್ಳೂರು ಗ್ರಾಮದ ಜಡಿಯ ಉರುಫ್ ಜಡಿಯಾಗೌಡ (56) ಮೃತಪಟ್ಟವರು. </p>.<p>ಕೆ.ಗುಡಿ ವಲಯದ ಸುಂಡ್ರೆ ಹಳ್ಳ ವ್ಯಾಪ್ತಿಗೆ ಬರುವ ರಾಮಪುರ ಗಸ್ತಿನ ಸುವರ್ಣಾವತಿ ಹಿನ್ನೀರಿನ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಸ್ಥಳವು ಅರಣ್ಯ ಗಡಿಯಿಂದ ಒಂದು ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. </p>.<p>ಯಾವ ಪ್ರಾಣಿಯ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ಆನೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. </p>.<p>ಬೆಳಿಗ್ಗೆ ಹಿನ್ನೀರಿಗೆ ಮೀನು ಹಿಡಿಯಲು ಜಡಿಯ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ವನ್ಯಪ್ರಾಣಿ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. </p>.<p>ಸ್ಥಳಕ್ಕೆ ಸಿಸಿಎಫ್ ಹೀರಾಲಾಲ್, ಬಿಆರ್ಟಿ ಡಿಸಿಎಫ್ ದೀಪ್ ಕೆ.ಕಂಟ್ರ್ಯಾಕ್ಟರ್ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. </p>.<p>ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದಲ್ಲಿ ಗುರುವಾರ ವನ್ಯಪ್ರಾಣಿ ದಾಳಿಗೆ ಸಿಲುಕಿ ಬುಡಕಟ್ಟು ಸಮುದಾಯದವರೊಬ್ಬರು ಮೃತಪಟ್ಟಿದ್ದಾರೆ. </p>.<p>ಕುಳ್ಳೂರು ಗ್ರಾಮದ ಜಡಿಯ ಉರುಫ್ ಜಡಿಯಾಗೌಡ (56) ಮೃತಪಟ್ಟವರು. </p>.<p>ಕೆ.ಗುಡಿ ವಲಯದ ಸುಂಡ್ರೆ ಹಳ್ಳ ವ್ಯಾಪ್ತಿಗೆ ಬರುವ ರಾಮಪುರ ಗಸ್ತಿನ ಸುವರ್ಣಾವತಿ ಹಿನ್ನೀರಿನ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಸ್ಥಳವು ಅರಣ್ಯ ಗಡಿಯಿಂದ ಒಂದು ಕಿ.ಮೀ ದೂರದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. </p>.<p>ಯಾವ ಪ್ರಾಣಿಯ ದಾಳಿಯಿಂದ ಅವರು ಮೃತಪಟ್ಟಿದ್ದಾರೆ ಎಂಬುದು ನಿಖರವಾಗಿ ತಿಳಿದಿಲ್ಲ. ಆನೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. </p>.<p>ಬೆಳಿಗ್ಗೆ ಹಿನ್ನೀರಿಗೆ ಮೀನು ಹಿಡಿಯಲು ಜಡಿಯ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ವನ್ಯಪ್ರಾಣಿ ದಾಳಿ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. </p>.<p>ಸ್ಥಳಕ್ಕೆ ಸಿಸಿಎಫ್ ಹೀರಾಲಾಲ್, ಬಿಆರ್ಟಿ ಡಿಸಿಎಫ್ ದೀಪ್ ಕೆ.ಕಂಟ್ರ್ಯಾಕ್ಟರ್ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. </p>.<p>ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>