ಗುಂಡ್ಲುಪೇಟೆಯಿಂದ ದಾವಣಗೆರೆಗೆ ಸಂಚರಿಸುವ ರಾಜ್ಯೋತ್ಸವ ದಿನದಂದು ಬಸ್ಸನ್ನು ವಿಶೇಷವಾಗಿ ಅಲಂಕರಿಸಿ ಕನ್ನಡದ ಪ್ರಮುಖ ಕಾವ್ಯ, ಕೃತಿ, ಕವಿಗಳು, ರಾಜ್ಯದ ಪ್ರಸಿದ್ಧ ಸ್ಥಳಗಳು, ನದಿಗಳು, ಜಿಲ್ಲೆಗಳ ನಕ್ಷೆ ಮತ್ತು ವಿವರಗಳು, ಸಾಹಿತ್ಯ ಸಮ್ಮೇಳದ ಅಧ್ಯಕ್ಷರು, ಜ್ಞಾನಪೀಠ ಪುರಸ್ಕೃತರ ಪಟ್ಟಿಯನ್ನು ಹಾಕಿ ಕನ್ನಡದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾರೆ.