‘ಕೇಂದ್ರ ಸಚಿವನಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಭವನಕ್ಕೆ ಕೊಳ್ಳೇಗಾಲದಲ್ಲಿ ಸ್ಥಳ ಹುಡುಕಿ, ಅದನ್ನು ಖರೀದಿಸಿ, ಶಂಕುಸ್ಥಾಪನೆಯನ್ನು ನಾನು ನೆರವೇರಿಸಿದ್ದೆ, ಆದರೆ 12 ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಶೌಚಾಲಯ, ಸುತ್ತುಗೋಡೆ, ಬಾಗಿಲು ಇಲ್ಲದಿರುವ ಅಪೂರ್ಣ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.