<p><strong>ಚಾಮರಾಜನಗರ: </strong>ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ತಲೆದೋರಲಿದೆ. ಹಾಗಾಗಿ, ಇಂಧನವನ್ನು ಮಿತವಾಗಿ ಬಳಸಬೇಕು. ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಸುವುದು ಉತ್ತಮ ಎಂಬ ಮಾತು ಸರ್ವೇಸಾಮಾನ್ಯ.<br /> <br /> ಹೊಂಗೆ, ಹಿಪ್ಪೆ, ಬೇವು, ಜಟ್ರೋಪ, ಸಿಮಾರೂಬದ ಬೀಜಗಳನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತಾಲ್ಲೂಕಿನ ಅಮಚವಾಡಿ ಗ್ರಾಮದ ರೈತ ಗುರುಸ್ವಾಮಿ ಸಿಮಾರೂಬ ಗಿಡಗಳನ್ನು ಬೆಳೆದಿದ್ದಾರೆ.<br /> <br /> 8 ವರ್ಷದ ಹಿಂದೆ ತಮ್ಮ 8 ಎಕರೆ ಪ್ರದೇಶದ ಸುತ್ತಲೂ 150 ಗಿಡಗಳನ್ನು ಬೆಂಗಳೂರಿನ ಸುಮಂಗಲಿ ಆಶ್ರಮದಿಂದ ತಂದು ನರ್ಸರಿ ಮಾಡುವ ಉದ್ದೇಶದಿಂದ ನೆಟ್ಟಿದ್ದರು. ಪ್ರಸ್ತುತ ಈ ಗಿಡಗಳು ದೊಡ್ಡದಾಗಿ ಬೆಳೆದು ನಿಂತಿವೆ. ಮರಗಳಲ್ಲಿ ಹಣ್ಣುಗಳ ಗೊಂಚಲು ಮನ ಸೆಳೆಯುತ್ತದೆ.<br /> <br /> ಸದ್ಯಕ್ಕೆ ಅರಣ್ಯ ಇಲಾಖೆ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಗುರುಸ್ವಾಮಿ ಅವರ ತೋಟಕ್ಕೆ ಬಂದು ಸಿಮಾರೂಬದ ಬೀಜಗಳನ್ನು ಆಯ್ದುಕೊಂಡು ಹೋಗುತ್ತಾರೆ. ಅವರು ಮಾರಾಟ ಮಾಡುತ್ತಿಲ್ಲ.<br /> <br /> ಮಾರುಕಟ್ಟೆಯಲ್ಲಿ ಪ್ರತಿ 1 ಕೆಜಿ ಸಿಮಾರೂಬದ ಬೀಜಗಳಿಗೆ ₹ 15ರಿಂದ 16 ಬೆಲೆ ಇದೆ. ಖಾಸಗಿಯವರಿಗೆ ನೀಡಿದರೆ 1 ಕೆಜಿಗೆ ₹ 18ರಿಂದ 20 ಸಿಗುತ್ತದೆ. ಆದರೆ, ಜೈವಿಕ ಇಂಧನದ ಬಳಕೆ ಬಗ್ಗೆ ಜನರಿಗೆ ಅರಿವು ಇಲ್ಲ. ಸ್ಥಳೀಯವಾಗಿ ಸಿಮಾರೂಬದ ಬೀಜ ಖರೀದಿಸಲು ಯಾರೊಬ್ಬರೂ ಮುಂದೆ ಬರುವುದಿಲ್ಲ ಎಂಬುದು ಅವರ ಕೊರಗು.<br /> <br /> ಸಿಮಾರೂಬ ಬೀಜದಲ್ಲಿ ಶೇ 30ರಿಂದ 35ರಷ್ಟು ಎಣ್ಣೆಯ ಅಂಶವಿದೆ. ಸಿಮಾರೂಬವನ್ನು ಒಣ ಭೂಮಿಯಲ್ಲೂ ಬೆಳೆಯಬಹುದು. ಜಿಲ್ಲೆಯಲ್ಲಿ ಈ ಗಿಡಗಳನ್ನು ಬೆಳೆದಿರುವವರ ಸಂಖ್ಯೆ ಅತಿವಿರಳ.<br /> <br /> ಸಿಮಾರೂಬ ಗಿಡ ನೆಟ್ಟ 6 ವರ್ಷದಲ್ಲಿ ಕಾಯಿ ಬಿಡುತ್ತದೆ. ಒಂದು ಮರ 40ರಿಂದ 50 ವರ್ಷ ಬಾಳುತ್ತದೆ. ಮರದಿಂದ 5ರಿಂದ 10 ಕೆಜಿ ಬೀಜ ಸಿಗುತ್ತದೆ. 15 ವರ್ಷದ ಮರದಿಂದ 50 ಕೆಜಿವರೆಗೂ ಬೀಜ ಸಿಗುತ್ತದೆ.<br /> <br /> ಮರವು ನೇರವಾಗಿ ಬೆಳೆಯದಂತೆ ಎಚ್ಚರವಹಿಸಬೇಕು. ಗಿಡ 6 ಅಡಿ ಎತ್ತರ ಬೆಳೆಯುತ್ತಿದಂತೆ ಕುಡಿಯನ್ನು ಕತ್ತರಿಸಿ ಹಾಕಬೇಕು. ಇದರಿಂದ ಕೊಂಬೆ ಹರಡಲು ಅನುಕೂಲವಾಗಲಿದೆ. ಜತೆಗೆ, ಬೀಜದ ಗೊಂಚಲು ಹೆಚ್ಚು ಬೆಳೆಯುತ್ತದೆ.<br /> <br /> ಉತ್ತಮ ಇಳುವರಿ ಸಿಗುತ್ತದೆ. ನೆಲದಲ್ಲಿ ಬಿದ್ದ ಬೀಜಗಳಿಗಿಂತ ಗೊಂಚಲಿನಲ್ಲಿ ಕಿತ್ತು ಬಳಸಬೇಕು. ಇದರಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಕುರಿ, ಮೇಕೆ ಹಾಗೂ ದನಗಳು ಸಿಮಾರೂಬದ ಎಲೆ ತಿನ್ನುವುದಿಲ್ಲ. ಹಾಗಾಗಿ, ಈ ಗಿಡವನ್ನು ಜಮೀನಿನ ಬದಿಯಲ್ಲಿ ನೆಡಬಹುದು. ಗೊಂಬೆ ತಯಾರಿಕೆಗೆ ಬಳಕೆ: ಸಿಮಾರೂಬ ಮರದಿಂದ ಹಲವು ಉಪಯೋಗವಿದೆ. ಇದು ಗಂಧದ ಮರದಷ್ಟೇ ಮೃದುವಾಗಿದೆ.<br /> <br /> ಇದನ್ನು ಗೊಂಬೆಗಳ ತಯಾರಿಕೆಗೂ ಬಳಸುತ್ತಾರೆ. ರಾಜ್ಯದಲ್ಲಿ ಗೊಂಬೆಗಳ ತಯಾರಿಕೆಗೆ ಪ್ರಸಿದ್ಧಿ ಹೊಂದಿರುವ ಚೆನ್ನಪಟ್ಟಣದಲ್ಲಿ ಈ ಮರವನ್ನು ಗೊಂಬೆ ತಯಾರಿಕೆಗೆ ಬಳಸಲಾಗುತ್ತದೆ ಎಂದು ಹೇಳಿದರು.<br /> <br /> ‘ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಗಮನಹರಿಸುವುದರಿಂದ ಗೊಂಬೆ ತಯಾರಿಕೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಜೈವಿಕ ಇಂಧನಕ್ಕೆ ಈ ಮರದ ಬೀಜವನ್ನು ಬಳಸಲಾಗುತ್ತದೆ ಎಂಬ ಅರಿವನ್ನು ರೈತರಿಗೆ ಮೂಡಿಸಬೇಕಿದೆ. ಸಿಮಾರೂಬ ಗಿಡ ನೆಟ್ಟು ಅವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯ’ ಎನ್ನುತ್ತಾರೆ ಗುರುಸ್ವಾಮಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ತಲೆದೋರಲಿದೆ. ಹಾಗಾಗಿ, ಇಂಧನವನ್ನು ಮಿತವಾಗಿ ಬಳಸಬೇಕು. ಪೆಟ್ರೋಲಿಯಂ ಇಂಧನಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ಬಳಸುವುದು ಉತ್ತಮ ಎಂಬ ಮಾತು ಸರ್ವೇಸಾಮಾನ್ಯ.<br /> <br /> ಹೊಂಗೆ, ಹಿಪ್ಪೆ, ಬೇವು, ಜಟ್ರೋಪ, ಸಿಮಾರೂಬದ ಬೀಜಗಳನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ತಾಲ್ಲೂಕಿನ ಅಮಚವಾಡಿ ಗ್ರಾಮದ ರೈತ ಗುರುಸ್ವಾಮಿ ಸಿಮಾರೂಬ ಗಿಡಗಳನ್ನು ಬೆಳೆದಿದ್ದಾರೆ.<br /> <br /> 8 ವರ್ಷದ ಹಿಂದೆ ತಮ್ಮ 8 ಎಕರೆ ಪ್ರದೇಶದ ಸುತ್ತಲೂ 150 ಗಿಡಗಳನ್ನು ಬೆಂಗಳೂರಿನ ಸುಮಂಗಲಿ ಆಶ್ರಮದಿಂದ ತಂದು ನರ್ಸರಿ ಮಾಡುವ ಉದ್ದೇಶದಿಂದ ನೆಟ್ಟಿದ್ದರು. ಪ್ರಸ್ತುತ ಈ ಗಿಡಗಳು ದೊಡ್ಡದಾಗಿ ಬೆಳೆದು ನಿಂತಿವೆ. ಮರಗಳಲ್ಲಿ ಹಣ್ಣುಗಳ ಗೊಂಚಲು ಮನ ಸೆಳೆಯುತ್ತದೆ.<br /> <br /> ಸದ್ಯಕ್ಕೆ ಅರಣ್ಯ ಇಲಾಖೆ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಗುರುಸ್ವಾಮಿ ಅವರ ತೋಟಕ್ಕೆ ಬಂದು ಸಿಮಾರೂಬದ ಬೀಜಗಳನ್ನು ಆಯ್ದುಕೊಂಡು ಹೋಗುತ್ತಾರೆ. ಅವರು ಮಾರಾಟ ಮಾಡುತ್ತಿಲ್ಲ.<br /> <br /> ಮಾರುಕಟ್ಟೆಯಲ್ಲಿ ಪ್ರತಿ 1 ಕೆಜಿ ಸಿಮಾರೂಬದ ಬೀಜಗಳಿಗೆ ₹ 15ರಿಂದ 16 ಬೆಲೆ ಇದೆ. ಖಾಸಗಿಯವರಿಗೆ ನೀಡಿದರೆ 1 ಕೆಜಿಗೆ ₹ 18ರಿಂದ 20 ಸಿಗುತ್ತದೆ. ಆದರೆ, ಜೈವಿಕ ಇಂಧನದ ಬಳಕೆ ಬಗ್ಗೆ ಜನರಿಗೆ ಅರಿವು ಇಲ್ಲ. ಸ್ಥಳೀಯವಾಗಿ ಸಿಮಾರೂಬದ ಬೀಜ ಖರೀದಿಸಲು ಯಾರೊಬ್ಬರೂ ಮುಂದೆ ಬರುವುದಿಲ್ಲ ಎಂಬುದು ಅವರ ಕೊರಗು.<br /> <br /> ಸಿಮಾರೂಬ ಬೀಜದಲ್ಲಿ ಶೇ 30ರಿಂದ 35ರಷ್ಟು ಎಣ್ಣೆಯ ಅಂಶವಿದೆ. ಸಿಮಾರೂಬವನ್ನು ಒಣ ಭೂಮಿಯಲ್ಲೂ ಬೆಳೆಯಬಹುದು. ಜಿಲ್ಲೆಯಲ್ಲಿ ಈ ಗಿಡಗಳನ್ನು ಬೆಳೆದಿರುವವರ ಸಂಖ್ಯೆ ಅತಿವಿರಳ.<br /> <br /> ಸಿಮಾರೂಬ ಗಿಡ ನೆಟ್ಟ 6 ವರ್ಷದಲ್ಲಿ ಕಾಯಿ ಬಿಡುತ್ತದೆ. ಒಂದು ಮರ 40ರಿಂದ 50 ವರ್ಷ ಬಾಳುತ್ತದೆ. ಮರದಿಂದ 5ರಿಂದ 10 ಕೆಜಿ ಬೀಜ ಸಿಗುತ್ತದೆ. 15 ವರ್ಷದ ಮರದಿಂದ 50 ಕೆಜಿವರೆಗೂ ಬೀಜ ಸಿಗುತ್ತದೆ.<br /> <br /> ಮರವು ನೇರವಾಗಿ ಬೆಳೆಯದಂತೆ ಎಚ್ಚರವಹಿಸಬೇಕು. ಗಿಡ 6 ಅಡಿ ಎತ್ತರ ಬೆಳೆಯುತ್ತಿದಂತೆ ಕುಡಿಯನ್ನು ಕತ್ತರಿಸಿ ಹಾಕಬೇಕು. ಇದರಿಂದ ಕೊಂಬೆ ಹರಡಲು ಅನುಕೂಲವಾಗಲಿದೆ. ಜತೆಗೆ, ಬೀಜದ ಗೊಂಚಲು ಹೆಚ್ಚು ಬೆಳೆಯುತ್ತದೆ.<br /> <br /> ಉತ್ತಮ ಇಳುವರಿ ಸಿಗುತ್ತದೆ. ನೆಲದಲ್ಲಿ ಬಿದ್ದ ಬೀಜಗಳಿಗಿಂತ ಗೊಂಚಲಿನಲ್ಲಿ ಕಿತ್ತು ಬಳಸಬೇಕು. ಇದರಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಕುರಿ, ಮೇಕೆ ಹಾಗೂ ದನಗಳು ಸಿಮಾರೂಬದ ಎಲೆ ತಿನ್ನುವುದಿಲ್ಲ. ಹಾಗಾಗಿ, ಈ ಗಿಡವನ್ನು ಜಮೀನಿನ ಬದಿಯಲ್ಲಿ ನೆಡಬಹುದು. ಗೊಂಬೆ ತಯಾರಿಕೆಗೆ ಬಳಕೆ: ಸಿಮಾರೂಬ ಮರದಿಂದ ಹಲವು ಉಪಯೋಗವಿದೆ. ಇದು ಗಂಧದ ಮರದಷ್ಟೇ ಮೃದುವಾಗಿದೆ.<br /> <br /> ಇದನ್ನು ಗೊಂಬೆಗಳ ತಯಾರಿಕೆಗೂ ಬಳಸುತ್ತಾರೆ. ರಾಜ್ಯದಲ್ಲಿ ಗೊಂಬೆಗಳ ತಯಾರಿಕೆಗೆ ಪ್ರಸಿದ್ಧಿ ಹೊಂದಿರುವ ಚೆನ್ನಪಟ್ಟಣದಲ್ಲಿ ಈ ಮರವನ್ನು ಗೊಂಬೆ ತಯಾರಿಕೆಗೆ ಬಳಸಲಾಗುತ್ತದೆ ಎಂದು ಹೇಳಿದರು.<br /> <br /> ‘ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಗಮನಹರಿಸುವುದರಿಂದ ಗೊಂಬೆ ತಯಾರಿಕೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಜೈವಿಕ ಇಂಧನಕ್ಕೆ ಈ ಮರದ ಬೀಜವನ್ನು ಬಳಸಲಾಗುತ್ತದೆ ಎಂಬ ಅರಿವನ್ನು ರೈತರಿಗೆ ಮೂಡಿಸಬೇಕಿದೆ. ಸಿಮಾರೂಬ ಗಿಡ ನೆಟ್ಟು ಅವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ. ಈ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯ’ ಎನ್ನುತ್ತಾರೆ ಗುರುಸ್ವಾಮಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>