ಇಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿವೆ. ಶೌಚಾಲಯದಿಂದ ಮಲಿನ ನೀರು ಹರಿದುಬರುತ್ತಿದ್ದು, ಅದನ್ನೇ ತುಳಿದುಕೊಂಡು ದೇವಾಲಯಕ್ಕೆ ತೆರಳಬೇಕಾಗಿದೆ. ಆದ್ದರಿಂದ, ಭಕ್ತರು ಬಸ್ ನಿಲ್ದಾಣದ ಪಕ್ಕದಲ್ಲಿರುವ ತೋಟ, ರಸ್ತೆಯ ಬದಿಯಲ್ಲಿ ಮಲ,ಮೂತ್ರ ವಿಸರ್ಜನೆ ಮಾಡುವಂತಾಗಿದೆ ಎಂದು ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿ ಗ್ರಾಮದ ಮಹೇಶ್ ಆರೋಪಿಸಿದ್ದಾರೆ.