ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ಸಾಧನೆಗೆ ಸಾರ್ವಜನಿಕರ ಮೆಚ್ಚುಗೆ’

Last Updated 5 ಏಪ್ರಿಲ್ 2018, 8:40 IST
ಅಕ್ಷರ ಗಾತ್ರ

ರೋಣ: ಸಿದ್ದರಾಮಯ್ಯನವರ ಆಡಳಿತ ವೈಖರಿಯನ್ನು ಮೆಚ್ಚಿ ಸಾಗರೋಪಾದಿಯಲ್ಲಿ ಜನರು ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಪಟ್ಟಣದ ಅವರ ನಿವಾಸದಲ್ಲಿ ಬುಧವಾರ ಪಟ್ಟಣದ ಗಾಣಿಗ ಸಮುದಾಯದ ಬಿಜೆಪಿ ಹಿರಿಯ ಮುಖಂಡರಾದ ಸಿದ್ದಣ್ಣಾ ನವಲಗುಂದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜೆಡಿಎಸ್ ಹಿರಿಯ ಮುಖಂಡ ಅಜ್ಜು ಬೇಪಾರಿ ನೇತೃತ್ವದಲ್ಲಿ ನೂರಾರು ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.ಸಿದ್ದರಾಮಯ್ಯನವರ ಸರ್ಕಾರವು ಕಳೆದ ಐದು ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದಂತೆ ಪಾರದರ್ಶಕವಾದ ಆಡಳಿತವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಕಾಂಗ್ರೆಸ್ ಪಕ್ಷವು ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ ಎಂದರು.ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಸಿದ್ದರಾಮಯ್ಯನವರೇ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂ.ಬಿ.ರಾಯನಗೌಡ್ರ, ಅಜ್ಜು ಬೇಪಾರಿ, ಸಿದ್ದಣ್ಣ ನವಲಗುಂದ, ಸುರೇಶ ನವಲಗುಂದ, ಮಿಥುನ್ ಪಾಟೀಲ, ಪ್ರಶಾಂತ ಪಾಟೀಲ,ಅಚ್ಚಪ್ಪ ಅಚ್ಚನಗೌಡ್ರ, ಎಚ್.ಬಿ.ನವಲಗುಂದ, ಸಂಗು ನವಲಗುಂದ, ವಿ.ಆರ್.ಗುಡಿಸಾಗರ, ಯೂಸಫ್ ಇಟಗಿ, ರಾಜಣ್ಣ ಪಲ್ಲೇದ, ಅಶೋಕ ಗಡಗಿ, ಭೀಮಪ್ಪ ನವಲಗುಂದ,ಶ್ರೀಪಾದಪ್ಪ ಸಾವಂತ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT