ಕೆ.ಆರ್.ನಗರ (ಮೈಸೂರು): ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಗೆಲುವಿಗೆ ದೇವರ ಮೊರೆ ಹೋದ ಅಭಿಮಾನಿಯೊಬ್ಬ ಗುರುವಾರ ಸುಮಾರು 4 ಕಿ.ಮೀ ಉರುಳು ಸೇವೆ ಮಾಡಿದ್ದಾರೆ.
ಪಟ್ಟಣದ ಆಂಜನೇಯ ಬ್ಲಾಕ್ ನಿವಾಸಿ ಬೆನಕಪ್ರಸಾದ್ ಅವರು ಇಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿ ಉರುಳು ಸೇವೆ ಪ್ರಾರಂಭಿಸಿದರು. ಹಳೆಎಡತೊರೆಯ ವೀರಾಂಜನೇಯಸ್ವಾಮಿ ದೇವಸ್ಥಾನದವರೆಗೆ ಉರುಳು ಸೇವೆ ಮಾಡಿದರು.