ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ ತಟ್ಟೀಕೆರೆ ಮಲ್ಲೇಶ್ ಮಾತನಾಡಿ, ಪಕ್ಷದ ಗುರಿ, ಧ್ಯೇಯ, ಉದ್ದೇಶಗಳನ್ನು ಇಟ್ಟಿಕೊಂಡು ರಾಜ್ಯದಾದ್ಯಂತ ಪ್ರಚಾರ ಶುರುವಾಗಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಪಕ್ಷದ ಪ್ರಣಾಳಿಕೆಯನ್ನು ಫೆಬ್ರುವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಗಜೇಂದ್ರ ಶರ್ಮ, ಯುವ ಮುಖಂಡರಾದ ಸಂಜಯ್, ಎಲ್.ಆರ್.ಎಸ್ ಶೆಟ್ಟಿ, ಮಾಲತೇಶ್ ಇದ್ದರು.