<p><strong>ಚಿಕ್ಕಬಳ್ಳಾಪುರ</strong>: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ಕಣ ನಿಚ್ಚಳವಾಗಿದೆ. 13 ಸ್ಥಾನಗಳಿಗೆ ಒಟ್ಟು 28 ಅಭ್ಯರ್ಥಿಗಳು ಸೆಣಸಾಟ ನಡೆಸುವರು.</p>.<p>ಶನಿವಾರ ನಾಮಪತ್ರ ವಾಪಸ್ಗೆ ಅಂತಿಮ ದಿನವಾಗಿತ್ತು. 14 ಮಂದಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಒಟ್ಟು 43 ಮಂದಿ ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಚೇಳೂರು ಕ್ಷೇತ್ರದ ಎನ್.ವಿ.ಶ್ರೀರಾಮರೆಡ್ಡಿ ನಾಮಪತ್ರ ತಿರಸ್ಕೃತವಾಗಿತ್ತು. </p>.<p>ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಮಾತ್ರ ಮೂವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಸೆಣಸಾಟವಿದೆ.</p>.<p>ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸೋಲು ಗೆಲುವಿಗೆ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.</p>.<p>ತೀವ್ರ ಚರ್ಚೆಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ (ನಂದಿ) ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗುದ್ದ ಶಿವಾನಂದ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್ ನಡುವೆ ಸ್ಪರ್ಧೆ ಇದೆ. ಈ ಮೂಲಕ ಒಂದೇ ಪಕ್ಷದಲ್ಲಿಯೇ ಬಣಗಳಾಗಿ ಸೆಣಸಾಟ ನಡೆಯುವುದು ನಿಚ್ಚಳವಾಗಿದೆ.</p>.<p>ಮಂಚೇನಹಳ್ಳಿ ಕ್ಷೇತ್ರದಲ್ಲಿ ಎನ್ಡಿಎ, ಕಾಂಗ್ರೆಸ್ ಬೆಂಬಲಿತರ ನಡುವೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿ ಕಣದಲ್ಲಿ ಇದ್ದಾರೆ. ಈ ಮೂಲಕ ತ್ರಿಕೋನ ಸ್ಪರ್ಧೆ ಇದೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿಯೂ ತ್ರಿಕೋನ ಸ್ಪರ್ಧೆ ನಡೆದಿದೆ. ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು ಹುರಿಯಾಳುಗಳಾಗಿದ್ದಾರೆ.</p>.<p>ಹೀಗೆ ಬೆರಳೆಣಿಕೆಯ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ಡಿಎ ಬೆಂಬಲಿತರ ನಡುವೆ ಪೈಪೋಟಿ ನಡೆದಿದೆ.</p>.<p>***</p>.<p>ಕಣದಲ್ಲಿ ಉಳಿದ ಅಭ್ಯರ್ಥಿಗಳು</p>.<p><strong>ಕ್ಷೇತ್ರ;ಅಭ್ಯರ್ಥಿಗಳು<br></strong>ಚಿಕ್ಕಬಳ್ಳಾಪುರ;ಎನ್.ಸಿ.ವೆಂಕಟೇಶ್, ಯಲುವಳ್ಳಿ ಎನ್.ರಮೇಶ್<br>ಪೆರೇಸಂದ್ರ;ಕೆ.ವಿ.ನಾಗರಾಜು,ಕೆ.ಆರ್.ರಾಜಣ್ಣ<br>ಮಂಚೇನಹಳ್ಳಿ;ಕಾಂತರಾಜು ಜೆ., ಎಚ್.ವಿ.ಶ್ರೀನಾಥ್, ನಾಗರಾಜ್ ಎಂ.<br>ಗೌರಿಬಿದನೂರು;ವೆಂಕಟರೆಡ್ಡಿ ಡಿ.ಎನ್.,ಜಿ.ಎಲ್.ದಿನೇಶ್<br>ಗುಡಿಬಂಡೆ;ಆದಿನಾರಾಯಣರೆಡ್ಡಿ, ಬೈರರೆಡ್ಡಿ ಜಿ.ಬಿ.<br>ಕೈವಾರ;ಕೆ.ಎನ್.ಆವಲಪ್ಪ, ಎಸ್.ಎನ್.ಚಿನ್ನಪ್ಪ<br>ಚಿಂತಾಮಣಿ;ವೈ.ಬಿ.ಅಶ್ವತ್ಥನಾರಾಯಣ, ಬಿ.ಶ್ರೀನಿವಾಸಪ್ಪ<br>ಚೇಳೂರು;ಶೇಖರ್ ಬಿ., ಕೆ.ಎನ್.ಕೃಷ್ಣರೆಡ್ಡಿ<br>ಬಾಗೇಪಲ್ಲಿ;ಪಿ.ವೆಂಕಟರಮಣರೆಡ್ಡಿ, ವಿ.ಮಂಜುನಾಥರೆಡ್ಡಿ<br>ಶಿಡ್ಲಘಟ್ಟ;ಮುನಿಯಪ್ಪ, ಬಿ.ಕೆ.ಚೊಕ್ಕೇಗೌಡ<br>ಜಂಗಮಕೋಟೆ;ಎಂ.ರಾಮಯ್ಯ, ಆರ್.ಶ್ರೀನಿವಾಸ್<br>ಚಿಕ್ಕಬಳ್ಳಾಪುರ ಮಹಿಳೆ;ಸುನಂದಮ್ಮ, ಸುಧಾ, ಮುನಿಲಕ್ಷ್ಮಮ್ಮ ಆರ್.<br>ಚಿಂತಾಮಣಿ;ಎಂ.ಸುಮ,ರೂಪ</p>. <p><strong>ನಾಮಪತ್ರ ವಾಪಸ್ ಪಡೆದವರು</strong></p>.<p>ಕ್ಷೇತ್ರ;ಅಭ್ಯರ್ಥಿ<br>ಚಿಕ್ಕಬಳ್ಳಾಪುರ;ಎ.ಶಿವಾನಂದ <br>ಪೆರೇಸಂದ್ರ;ರಾಜೇಶ್ ಆರ್.,<br>ಗೌರಿಬಿದನೂರು;ಶ್ರೀನಿವಾಸರೆಡ್ಡಿ,<br> ಗುಡಿಬಂಡೆ;ವೆಂಕಟೇಶ್ ಜಿ.ಟಿ.,ನಾರಾಯಣಸ್ವಾಮಿ ಬಿ.ಎಸ್.<br>ಕೈವಾರ;ಎಂ.ದೇವರಾಜರೆಡ್ಡಿ,ಮುನಿನಾರಾಯಣಪ್ಪ<br>ಚಿಂತಾಮಣಿ;ಪಟೇಲ್ ಅಶ್ವತ್ಥನಾರಾಯಣರೆಡ್ಡಿ<br>ಬಾಗೇಪಲ್ಲಿ;ಕೃಷ್ಣಪ್ಪ<br>ಶಿಡ್ಲಘಟ್ಟ;ಪ್ರದೀಪ್ ಕುಮಾರ್ ಎಸ್., ವೆಂಕಟರೆಡ್ಡಿ ಜಿ.ಕೆ., ದೇವರೆಡ್ಡಿ ಪಿ.ವಿ<br>ಜಂಗಮಕೋಟೆ;ರವಿಕುಮಾರ್ ಬಿ.ಟಿ.<br>ಚೇಳೂರು;ವೆಂಕಟರವಣಪ್ಪ ಎಚ್.ವಿ </p>.<p><strong>ಆಟೊ ರಿಕ್ಷಾ ದ್ರಾಕ್ಷಿಯ ಚಿಹ್ನೆ</strong> <strong>ಹೆಚ್ಚು</strong> </p><p>ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿ ಚಿಹ್ನೆಗಳನ್ನು ವಿತರಿಸಿದ್ದಾರೆ. ಆಟೊ ರಿಕ್ಷಾ ಮತ್ತು ದ್ರಾಕ್ಷಿ ಚಿಹ್ನೆ ಪಡೆದಿರುವ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಇದನ್ನು ಹೊರತುಪಡಿಸಿ ಪ್ರೆಷರ್ ಕುಕ್ಕರ್ ಹೊಲಿಗೆ ಯಂತ್ರ ಗ್ಯಾಸ್ ಸಿಲಿಂಡರ್ ಅನ್ನು ಅಭ್ಯರ್ಥಿಗಳು ಚಿಹ್ನೆಯಾಗಿ ಪಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ಕಣ ನಿಚ್ಚಳವಾಗಿದೆ. 13 ಸ್ಥಾನಗಳಿಗೆ ಒಟ್ಟು 28 ಅಭ್ಯರ್ಥಿಗಳು ಸೆಣಸಾಟ ನಡೆಸುವರು.</p>.<p>ಶನಿವಾರ ನಾಮಪತ್ರ ವಾಪಸ್ಗೆ ಅಂತಿಮ ದಿನವಾಗಿತ್ತು. 14 ಮಂದಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಒಟ್ಟು 43 ಮಂದಿ ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಚೇಳೂರು ಕ್ಷೇತ್ರದ ಎನ್.ವಿ.ಶ್ರೀರಾಮರೆಡ್ಡಿ ನಾಮಪತ್ರ ತಿರಸ್ಕೃತವಾಗಿತ್ತು. </p>.<p>ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಮಾತ್ರ ಮೂವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಸೆಣಸಾಟವಿದೆ.</p>.<p>ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸೋಲು ಗೆಲುವಿಗೆ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.</p>.<p>ತೀವ್ರ ಚರ್ಚೆಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ (ನಂದಿ) ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗುದ್ದ ಶಿವಾನಂದ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್ ನಡುವೆ ಸ್ಪರ್ಧೆ ಇದೆ. ಈ ಮೂಲಕ ಒಂದೇ ಪಕ್ಷದಲ್ಲಿಯೇ ಬಣಗಳಾಗಿ ಸೆಣಸಾಟ ನಡೆಯುವುದು ನಿಚ್ಚಳವಾಗಿದೆ.</p>.<p>ಮಂಚೇನಹಳ್ಳಿ ಕ್ಷೇತ್ರದಲ್ಲಿ ಎನ್ಡಿಎ, ಕಾಂಗ್ರೆಸ್ ಬೆಂಬಲಿತರ ನಡುವೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿ ಕಣದಲ್ಲಿ ಇದ್ದಾರೆ. ಈ ಮೂಲಕ ತ್ರಿಕೋನ ಸ್ಪರ್ಧೆ ಇದೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿಯೂ ತ್ರಿಕೋನ ಸ್ಪರ್ಧೆ ನಡೆದಿದೆ. ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು ಹುರಿಯಾಳುಗಳಾಗಿದ್ದಾರೆ.</p>.<p>ಹೀಗೆ ಬೆರಳೆಣಿಕೆಯ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ಡಿಎ ಬೆಂಬಲಿತರ ನಡುವೆ ಪೈಪೋಟಿ ನಡೆದಿದೆ.</p>.<p>***</p>.<p>ಕಣದಲ್ಲಿ ಉಳಿದ ಅಭ್ಯರ್ಥಿಗಳು</p>.<p><strong>ಕ್ಷೇತ್ರ;ಅಭ್ಯರ್ಥಿಗಳು<br></strong>ಚಿಕ್ಕಬಳ್ಳಾಪುರ;ಎನ್.ಸಿ.ವೆಂಕಟೇಶ್, ಯಲುವಳ್ಳಿ ಎನ್.ರಮೇಶ್<br>ಪೆರೇಸಂದ್ರ;ಕೆ.ವಿ.ನಾಗರಾಜು,ಕೆ.ಆರ್.ರಾಜಣ್ಣ<br>ಮಂಚೇನಹಳ್ಳಿ;ಕಾಂತರಾಜು ಜೆ., ಎಚ್.ವಿ.ಶ್ರೀನಾಥ್, ನಾಗರಾಜ್ ಎಂ.<br>ಗೌರಿಬಿದನೂರು;ವೆಂಕಟರೆಡ್ಡಿ ಡಿ.ಎನ್.,ಜಿ.ಎಲ್.ದಿನೇಶ್<br>ಗುಡಿಬಂಡೆ;ಆದಿನಾರಾಯಣರೆಡ್ಡಿ, ಬೈರರೆಡ್ಡಿ ಜಿ.ಬಿ.<br>ಕೈವಾರ;ಕೆ.ಎನ್.ಆವಲಪ್ಪ, ಎಸ್.ಎನ್.ಚಿನ್ನಪ್ಪ<br>ಚಿಂತಾಮಣಿ;ವೈ.ಬಿ.ಅಶ್ವತ್ಥನಾರಾಯಣ, ಬಿ.ಶ್ರೀನಿವಾಸಪ್ಪ<br>ಚೇಳೂರು;ಶೇಖರ್ ಬಿ., ಕೆ.ಎನ್.ಕೃಷ್ಣರೆಡ್ಡಿ<br>ಬಾಗೇಪಲ್ಲಿ;ಪಿ.ವೆಂಕಟರಮಣರೆಡ್ಡಿ, ವಿ.ಮಂಜುನಾಥರೆಡ್ಡಿ<br>ಶಿಡ್ಲಘಟ್ಟ;ಮುನಿಯಪ್ಪ, ಬಿ.ಕೆ.ಚೊಕ್ಕೇಗೌಡ<br>ಜಂಗಮಕೋಟೆ;ಎಂ.ರಾಮಯ್ಯ, ಆರ್.ಶ್ರೀನಿವಾಸ್<br>ಚಿಕ್ಕಬಳ್ಳಾಪುರ ಮಹಿಳೆ;ಸುನಂದಮ್ಮ, ಸುಧಾ, ಮುನಿಲಕ್ಷ್ಮಮ್ಮ ಆರ್.<br>ಚಿಂತಾಮಣಿ;ಎಂ.ಸುಮ,ರೂಪ</p>. <p><strong>ನಾಮಪತ್ರ ವಾಪಸ್ ಪಡೆದವರು</strong></p>.<p>ಕ್ಷೇತ್ರ;ಅಭ್ಯರ್ಥಿ<br>ಚಿಕ್ಕಬಳ್ಳಾಪುರ;ಎ.ಶಿವಾನಂದ <br>ಪೆರೇಸಂದ್ರ;ರಾಜೇಶ್ ಆರ್.,<br>ಗೌರಿಬಿದನೂರು;ಶ್ರೀನಿವಾಸರೆಡ್ಡಿ,<br> ಗುಡಿಬಂಡೆ;ವೆಂಕಟೇಶ್ ಜಿ.ಟಿ.,ನಾರಾಯಣಸ್ವಾಮಿ ಬಿ.ಎಸ್.<br>ಕೈವಾರ;ಎಂ.ದೇವರಾಜರೆಡ್ಡಿ,ಮುನಿನಾರಾಯಣಪ್ಪ<br>ಚಿಂತಾಮಣಿ;ಪಟೇಲ್ ಅಶ್ವತ್ಥನಾರಾಯಣರೆಡ್ಡಿ<br>ಬಾಗೇಪಲ್ಲಿ;ಕೃಷ್ಣಪ್ಪ<br>ಶಿಡ್ಲಘಟ್ಟ;ಪ್ರದೀಪ್ ಕುಮಾರ್ ಎಸ್., ವೆಂಕಟರೆಡ್ಡಿ ಜಿ.ಕೆ., ದೇವರೆಡ್ಡಿ ಪಿ.ವಿ<br>ಜಂಗಮಕೋಟೆ;ರವಿಕುಮಾರ್ ಬಿ.ಟಿ.<br>ಚೇಳೂರು;ವೆಂಕಟರವಣಪ್ಪ ಎಚ್.ವಿ </p>.<p><strong>ಆಟೊ ರಿಕ್ಷಾ ದ್ರಾಕ್ಷಿಯ ಚಿಹ್ನೆ</strong> <strong>ಹೆಚ್ಚು</strong> </p><p>ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿ ಚಿಹ್ನೆಗಳನ್ನು ವಿತರಿಸಿದ್ದಾರೆ. ಆಟೊ ರಿಕ್ಷಾ ಮತ್ತು ದ್ರಾಕ್ಷಿ ಚಿಹ್ನೆ ಪಡೆದಿರುವ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಇದನ್ನು ಹೊರತುಪಡಿಸಿ ಪ್ರೆಷರ್ ಕುಕ್ಕರ್ ಹೊಲಿಗೆ ಯಂತ್ರ ಗ್ಯಾಸ್ ಸಿಲಿಂಡರ್ ಅನ್ನು ಅಭ್ಯರ್ಥಿಗಳು ಚಿಹ್ನೆಯಾಗಿ ಪಡೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>