<p>ಗೌರಿಬಿದನೂರು: ಕೊರೊನಾ ಸೋಂಕಿನ ಭೀತಿ, ಕೋವಿಡ್ 19 ಪ್ರಕರಣಗಳು, ಅವುಗಳನ್ನು ನಿಯಂತ್ರಿಸಲು ಜಾರಿಗೆ ತಂದ ಲಾಕ್ಡೌನ್ನಿಂದಾಗಿ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತಾಲ್ಲೂಕು ಆಡಳಿತ ಪರಿಚಯಿಸಿದ ವಿನೂತನ 'ರೈತ ಸಂತೆ' ಅನ್ನದಾತರ ಪಾಲಿಗೆ ವರದಾನವಾಗಿದೆ.</p>.<p>ಒಂದೆಡೆ ಲಾಕ್ಡೌನ್ ಕಾರಣಕ್ಕೆ ಮನೆಯಿಂದ ಹೊರ ಹೋಗಲಾಗದೆ ದಿಗ್ಬಂಧನಕ್ಕೆ ಒಳಗಾದ ಜನರು, ಇನ್ನೊಂದೆಡೆ ಅಸ್ತವ್ಯಸ್ತಗೊಂಡ ಮಾರುಕಟ್ಟೆ ವ್ಯವಸ್ಥೆಯಿಂದ ಜಮೀನು, ತೋಟಗಳಲ್ಲಿಯೇ ಕೊಳೆಯುತ್ತಿದ್ದ ತರಕಾರಿ, ಹಣ್ಣುಗಳನ್ನು ಕಂಡು ರೋಸಿ ಹೋಗುತ್ತಿದ್ದ ರೈತರಿಗೆ ರೈತರ ಸಂತೆ ಭರವಸೆಯ ಬೆಳಕಿನಂತೆ ಗೋಚರಿಸಿದೆ.</p>.<p>ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರದಿಂದ ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡ ಬಿ.ಎನ್.ವರಪ್ರಸಾದರೆಡ್ಡಿ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ರೈತರ ಬವಣೆಗೆ ಪರಿಹಾರ ಹುಡುಕಿದ ವೇಳೆ ಹೊಳೆದದ್ದೇ ರೈತ ಸಂತೆ ಪರಿಕಲ್ಪನೆ.</p>.<p>ತಾವು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ತಲುಪಿಸಿ, ಮಧ್ಯವರ್ತಿಗಳಿಂದ ನಷ್ಟವಾಗುತ್ತಿದ್ದ ಆದಾಯವೂ ರೈತರಿಗೆ ಸೇರುವಂತೆ ರೂಪಿಸಿದ ಸಂತೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಎರಡ್ಮೂರು ವಾರ್ಡ್ಗಳ ನಡುವೆ ಒಂದು ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ, ಅನುಕೂಲ ಕಲ್ಪಿಸಲಾಗಿತ್ತು.</p>.<p>ರೈತರು ತಾವು ಬೆಳೆದ ತರಕಾರಿ, ಹಣ್ಣು, ಸೊಪ್ಪು, ಹೂಗಳನ್ನು ಈ ಸಂತೆಗೆ ತಂದು ನೇರವಾಗಿ ಗ್ರಾಹಕರಿಗೆ ಮಾರುವ ಮೂಲಕ, ದಳ್ಳಾಳಿಗಳ ಹಾವಳಿ ಇಲ್ಲದೆ ಮಾರುಕಟ್ಟೆ ಕಂಡುಕೊಳ್ಳುವ ಹೊಸ ಬಗೆಯನ್ನು ಪರಿಚಯಿಸಿಕೊಂಡು ಪುಳಕಗೊಂಡರು.</p>.<p>ತಾಲ್ಲೂಕು ಆಡಳಿತ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ರೈತ ಸಂತೆಗೆ ಬಂದ ಗ್ರಾಹಕರು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ರೈತರಿಂದಲೇ ಕಡಿಮೆ ಬೆಲೆಗೆ ಸಿಗುವ ತಾಜಾ ಹಣ್ಣು, ತರಕಾರಿ ಖರೀದಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.</p>.<p>ನಗರದಲ್ಲಿ ಸುಮಾರು 17 ದಿನಗಳಿಂದ ವಿವಿಧ ಬಡಾವಣೆಗಳಲ್ಲಿ ರೈತ ಸಂತೆ ವಹಿವಾಟು ನಡೆಸಿದೆ. ಇದರಲ್ಲಿ ಅಂದಾಜು 162 ಟನ್ ಹಣ್ಣು ಮತ್ತು ತರಕಾರಿ ನೇರವಾಗಿ ರೈತರಿಂದ ಗ್ರಾಹಕರಿಗೆ ಮಾರಾಟವಾಗಿ, ಸುಮಾರು ₹31.39 ಲಕ್ಷದ ವ್ಯಾಪಾರ ನಡೆದಿದೆ. ಈ ಸಂತೆ ನಿರಂತರವಾಗಿರಬೇಕು ಎನ್ನುವುದು ನಾಗರಿಕರ ಬಯಕೆ.</p>.<p>ಕಳೆದ ವರ್ಷ ಶ್ರವಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ವಿಶೇಷ ಅಧಿಕಾರಿಯಾಗಿ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಮಸ್ತಾಕಾಭಿಷೇಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಬಿ.ಎನ್.ವರಪ್ರಸಾದರೆಡ್ಡಿ ಅವರು ಇದೀಗ ರೈತ ಸಂತೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೌರಿಬಿದನೂರು: ಕೊರೊನಾ ಸೋಂಕಿನ ಭೀತಿ, ಕೋವಿಡ್ 19 ಪ್ರಕರಣಗಳು, ಅವುಗಳನ್ನು ನಿಯಂತ್ರಿಸಲು ಜಾರಿಗೆ ತಂದ ಲಾಕ್ಡೌನ್ನಿಂದಾಗಿ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತಾಲ್ಲೂಕು ಆಡಳಿತ ಪರಿಚಯಿಸಿದ ವಿನೂತನ 'ರೈತ ಸಂತೆ' ಅನ್ನದಾತರ ಪಾಲಿಗೆ ವರದಾನವಾಗಿದೆ.</p>.<p>ಒಂದೆಡೆ ಲಾಕ್ಡೌನ್ ಕಾರಣಕ್ಕೆ ಮನೆಯಿಂದ ಹೊರ ಹೋಗಲಾಗದೆ ದಿಗ್ಬಂಧನಕ್ಕೆ ಒಳಗಾದ ಜನರು, ಇನ್ನೊಂದೆಡೆ ಅಸ್ತವ್ಯಸ್ತಗೊಂಡ ಮಾರುಕಟ್ಟೆ ವ್ಯವಸ್ಥೆಯಿಂದ ಜಮೀನು, ತೋಟಗಳಲ್ಲಿಯೇ ಕೊಳೆಯುತ್ತಿದ್ದ ತರಕಾರಿ, ಹಣ್ಣುಗಳನ್ನು ಕಂಡು ರೋಸಿ ಹೋಗುತ್ತಿದ್ದ ರೈತರಿಗೆ ರೈತರ ಸಂತೆ ಭರವಸೆಯ ಬೆಳಕಿನಂತೆ ಗೋಚರಿಸಿದೆ.</p>.<p>ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರದಿಂದ ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡ ಬಿ.ಎನ್.ವರಪ್ರಸಾದರೆಡ್ಡಿ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ರೈತರ ಬವಣೆಗೆ ಪರಿಹಾರ ಹುಡುಕಿದ ವೇಳೆ ಹೊಳೆದದ್ದೇ ರೈತ ಸಂತೆ ಪರಿಕಲ್ಪನೆ.</p>.<p>ತಾವು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ತಲುಪಿಸಿ, ಮಧ್ಯವರ್ತಿಗಳಿಂದ ನಷ್ಟವಾಗುತ್ತಿದ್ದ ಆದಾಯವೂ ರೈತರಿಗೆ ಸೇರುವಂತೆ ರೂಪಿಸಿದ ಸಂತೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಎರಡ್ಮೂರು ವಾರ್ಡ್ಗಳ ನಡುವೆ ಒಂದು ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ, ಅನುಕೂಲ ಕಲ್ಪಿಸಲಾಗಿತ್ತು.</p>.<p>ರೈತರು ತಾವು ಬೆಳೆದ ತರಕಾರಿ, ಹಣ್ಣು, ಸೊಪ್ಪು, ಹೂಗಳನ್ನು ಈ ಸಂತೆಗೆ ತಂದು ನೇರವಾಗಿ ಗ್ರಾಹಕರಿಗೆ ಮಾರುವ ಮೂಲಕ, ದಳ್ಳಾಳಿಗಳ ಹಾವಳಿ ಇಲ್ಲದೆ ಮಾರುಕಟ್ಟೆ ಕಂಡುಕೊಳ್ಳುವ ಹೊಸ ಬಗೆಯನ್ನು ಪರಿಚಯಿಸಿಕೊಂಡು ಪುಳಕಗೊಂಡರು.</p>.<p>ತಾಲ್ಲೂಕು ಆಡಳಿತ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ರೈತ ಸಂತೆಗೆ ಬಂದ ಗ್ರಾಹಕರು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ರೈತರಿಂದಲೇ ಕಡಿಮೆ ಬೆಲೆಗೆ ಸಿಗುವ ತಾಜಾ ಹಣ್ಣು, ತರಕಾರಿ ಖರೀದಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.</p>.<p>ನಗರದಲ್ಲಿ ಸುಮಾರು 17 ದಿನಗಳಿಂದ ವಿವಿಧ ಬಡಾವಣೆಗಳಲ್ಲಿ ರೈತ ಸಂತೆ ವಹಿವಾಟು ನಡೆಸಿದೆ. ಇದರಲ್ಲಿ ಅಂದಾಜು 162 ಟನ್ ಹಣ್ಣು ಮತ್ತು ತರಕಾರಿ ನೇರವಾಗಿ ರೈತರಿಂದ ಗ್ರಾಹಕರಿಗೆ ಮಾರಾಟವಾಗಿ, ಸುಮಾರು ₹31.39 ಲಕ್ಷದ ವ್ಯಾಪಾರ ನಡೆದಿದೆ. ಈ ಸಂತೆ ನಿರಂತರವಾಗಿರಬೇಕು ಎನ್ನುವುದು ನಾಗರಿಕರ ಬಯಕೆ.</p>.<p>ಕಳೆದ ವರ್ಷ ಶ್ರವಣಬೆಳಗೊಳದಲ್ಲಿ ನಡೆದ ಮಹಾ ಮಸ್ತಕಾಭಿಷೇಕದ ವಿಶೇಷ ಅಧಿಕಾರಿಯಾಗಿ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಮಸ್ತಾಕಾಭಿಷೇಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಬಿ.ಎನ್.ವರಪ್ರಸಾದರೆಡ್ಡಿ ಅವರು ಇದೀಗ ರೈತ ಸಂತೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಭಾಜನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>