ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟ ಪ್ರದೇಶದಲ್ಲಿ ಇತ್ತೀಚೆಗೆ ಅಗ್ನಿ ಆಕಸ್ಮಿಕ ಘಟನೆಯಲ್ಲಿ ನಷ್ಟ ಅನುಭವಿಸಿದ, ಗಾಯಗೊಂಡ ಮೌಲಾ ಅವರ ಕುಟುಂಬದವರನ್ನು ಸೋಮವಾರ ಭೇಟಿ ಮಾಡಿದ ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹಾಗೂ ಸಮಾಜ ಸೇವಕ ಬಿ.ವಿ.ಆನಂದ್ ಅವರು ಸಾಂತ್ವನ ಹೇಳಿ, ₹20 ಸಾವಿರ ಆರ್ಥಿಕ ನೆರವು ನೀಡಿದರು.
ಈ ವೇಳೆ ಹಾಜರಿದ್ದ ಮುಖಂಡರಾದ ಮುನಿಕೃಷ್ಣಪ್ಪ, ಮಂಜುನಾಥ, ಗೋಪಿ ವೇಣುಗೋಪಾಲ್, ಮಂಜುಳಾ, ಮೂರ್ತಿ ಹಾಗೂ ಆಟೊ ಸುಭಾನ್ ಅವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ನೀಡುವುದಾಗಿ ತಿಳಿಸಿದರು.