ತಾಲ್ಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಕೆರೆ, ಸ್ಮಶಾನ, ಗೋಮಾಳ ಒತ್ತುವರಿಯಾಗಲು ಕಂದಾಯ ಅಧಿಕಾರಿಗಳೇ ಕಾರಣ. ಅವರ ಭ್ರಷ್ಟಾಚಾರ, ನಿಷ್ಕ್ರಿಯತೆಯಿಂದ ಸರ್ಕಾರಿ ಜಮೀನುಗಳು ಯಥೇಚ್ಚವಾಗಿ ಕಬಳಿಕೆಯಾಗುತ್ತಿವೆ. ಸರ್ಕಾರಿ ಆಸ್ತಿಗಳನ್ನು ಕಾಪಾಡುವ ಹೊಣೆಗಾರಿಕೆ, ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಲಂಚದ ಆಸೆಗಾಗಿ ಪರೋಕ್ಷವಾಗಿ ಭೂಗಳ್ಳರೊಂದಿಗೆ ಶಾಮೀಲಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.