<p><strong>ಚಿಕ್ಕಬಳ್ಳಾಪುರ</strong>: ‘ಮಕ್ಕಳು ಮೊಬೈಲ್, ಸ್ಮಾರ್ಟ್ಫೋನ್ಗಳೆಂಬ ಮೃಗದ ಕೈಗೆ ಸಿಲುಕಬಾರದು. ಸಿಲುಕಿದರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ’ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.</p>.<p>ನಗರದಲ್ಲಿ ಸಕಲ ರಂಗಹೆಜ್ಜೆ ಸಂಸ್ಥೆಯು ಶನಿವಾರದಿಂದ ಹಮ್ಮಿಕೊಂಡಿರುವ ‘ಸುಗ್ಗಿ ನಾಟಕೋತ್ಸವ’ದಲ್ಲಿ ‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ನಮ್ಮ ಮಕ್ಕಳು ಏನು ಕಲಿಯಬೇಕು, ಪಠ್ಯದ ಮೂಲಕ ಏನು ಕಲಿಯುತ್ತಿದ್ದಾರೆ. ಈ ವಿಚಾರಗಳು ಅವರನ್ನು ಬೌದ್ಧಿಕ ಉನ್ನತಿಗೆ ಕೊಂಡೊಯ್ಯುತ್ತದೆಯೇ ಎನ್ನುವುದು ಪೋಷಕರಿಗೆ ಗೊತ್ತಿಲ್ಲ ಎಂದರು.</p>.<p>ನಮ್ಮ ಮಕ್ಕಳು ಓದುವ ಪಠ್ಯಗಳು ವಿಷಯ ತಜ್ಞರಿಂದ ನಿರ್ಧಾರ ಆಗುತ್ತವೆ. ಇದರಿಂದ ಮಗುವಿನ ಒಳ ಜಗತ್ತಿನ ತುಳಿತವಾಗುತ್ತಿದೆ. ಈ ಬಗ್ಗೆ ತಂದೆ ತಾಯಿ ಯೋಚಿಸುವುದಿಲ್ಲ. ಮಕ್ಕಳು ಶೇ 75, ಶೇ 80ರಷ್ಟು ಅಂಕಗಳಿಸಬೇಕು ಎನ್ನುವುದರತ್ತಲೇ ಪೋಷಕರು ದೃಷ್ಟಿ ಹರಿಸುವರು ಎಂದರು.</p>.<p>ಚಿತ್ರಕಲೆ, ರಂಗಕಲೆ ಹೀಗೆ ಕಲೆಗಳು ಮಕ್ಕಳ ಒಳಗಿನ ಮನಸ್ಸನ್ನು ತೆರೆದಿಡುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಉಸಿರಾಡುವ ಚೈತನ್ಯ ಕೊಡುತ್ತವೆ. ಒಳ್ಳೆಯ ನಾಟಕ ನೋಡಬೇಕು, ಸಂಗೀತ ಕೇಳಬೇಕು ಎನ್ನುವುದು ನಮ್ಮ ಮನದಲ್ಲಿ ಮೂಡಬೇಕು ಎಂದು ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, <br />ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ‘ಮಕ್ಕಳು ಮೊಬೈಲ್, ಸ್ಮಾರ್ಟ್ಫೋನ್ಗಳೆಂಬ ಮೃಗದ ಕೈಗೆ ಸಿಲುಕಬಾರದು. ಸಿಲುಕಿದರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ’ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.</p>.<p>ನಗರದಲ್ಲಿ ಸಕಲ ರಂಗಹೆಜ್ಜೆ ಸಂಸ್ಥೆಯು ಶನಿವಾರದಿಂದ ಹಮ್ಮಿಕೊಂಡಿರುವ ‘ಸುಗ್ಗಿ ನಾಟಕೋತ್ಸವ’ದಲ್ಲಿ ‘ನೆಲದ ಪಠ್ಯಗಳು ಮಕ್ಕಳ ಸಾಂಸ್ಕೃತಿಕ ಪ್ರಜ್ಞೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.</p>.<p>ನಮ್ಮ ಮಕ್ಕಳು ಏನು ಕಲಿಯಬೇಕು, ಪಠ್ಯದ ಮೂಲಕ ಏನು ಕಲಿಯುತ್ತಿದ್ದಾರೆ. ಈ ವಿಚಾರಗಳು ಅವರನ್ನು ಬೌದ್ಧಿಕ ಉನ್ನತಿಗೆ ಕೊಂಡೊಯ್ಯುತ್ತದೆಯೇ ಎನ್ನುವುದು ಪೋಷಕರಿಗೆ ಗೊತ್ತಿಲ್ಲ ಎಂದರು.</p>.<p>ನಮ್ಮ ಮಕ್ಕಳು ಓದುವ ಪಠ್ಯಗಳು ವಿಷಯ ತಜ್ಞರಿಂದ ನಿರ್ಧಾರ ಆಗುತ್ತವೆ. ಇದರಿಂದ ಮಗುವಿನ ಒಳ ಜಗತ್ತಿನ ತುಳಿತವಾಗುತ್ತಿದೆ. ಈ ಬಗ್ಗೆ ತಂದೆ ತಾಯಿ ಯೋಚಿಸುವುದಿಲ್ಲ. ಮಕ್ಕಳು ಶೇ 75, ಶೇ 80ರಷ್ಟು ಅಂಕಗಳಿಸಬೇಕು ಎನ್ನುವುದರತ್ತಲೇ ಪೋಷಕರು ದೃಷ್ಟಿ ಹರಿಸುವರು ಎಂದರು.</p>.<p>ಚಿತ್ರಕಲೆ, ರಂಗಕಲೆ ಹೀಗೆ ಕಲೆಗಳು ಮಕ್ಕಳ ಒಳಗಿನ ಮನಸ್ಸನ್ನು ತೆರೆದಿಡುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಉಸಿರಾಡುವ ಚೈತನ್ಯ ಕೊಡುತ್ತವೆ. ಒಳ್ಳೆಯ ನಾಟಕ ನೋಡಬೇಕು, ಸಂಗೀತ ಕೇಳಬೇಕು ಎನ್ನುವುದು ನಮ್ಮ ಮನದಲ್ಲಿ ಮೂಡಬೇಕು ಎಂದು ಹೇಳಿದರು.</p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, <br />ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>