ಕೆ.ನರಸಿಂಹಮೂರ್ತಿ ಮಾತನಾಡಿ, ‘ನಾನು ಇಲ್ಲಿ ಕೆಲಸ ನಿರ್ವಹಿಸಿದಷ್ಟು ದಿನ ಸಾರ್ವಜನಿಕರು, ರಾಜಕೀಯ ಮುಖಂಡರು, ರೈತ ಮುಖಂಡರು, ಸಂಘಸಂಸ್ಥೆಗಳ ಮುಖಂಡರು ತುಂಬಾ ಸಹಕಾರ ನೀಡಿದರು. ಜನರ ನೋವಿಗೆ ಸ್ಪಂದಿಸಿ ಮಾಡಿದ ಕೆಲಸ ನನಗೆ ಆತ್ಮತೃಪ್ತಿ ತಂದಿದೆ. ಮುಂದೆಯೂ ಮತ್ತೊಮ್ಮೆ ಈ ಜಿಲ್ಲೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕರೆ ಖಂಡಿತ ಸಂತಸದಿಂದಲೇ ಬರುತ್ತೇನೆ’ ಎಂದು ಹೇಳಿದರು.