ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಸುನೀತಾ ಇದೀಗ ನ್ಯೂಜೆರ್ಸಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿನ್ನಂಪಲ್ಲಿ ಗ್ರಾಮದ ಹುಟ್ಟು ಅಂಧರ ಸುದ್ದಿಯನ್ನು ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ಟಿ. ವೀರಾಂಜನೇಯ ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ರವಾನಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ದಂಪತಿ, ವೀರಾಂಜನೇಯರವರ ಬ್ಯಾಂಕಿನ ಖಾತೆಗೆ ₹10 ಸಾವಿರ ವರ್ಗಾಯಿಸಿ, ಅಂಧರಿಗೆ ನೀಡಲು ತಿಳಿಸಿದ್ದಾರೆ.