‘ಕೇಂದ್ರ ಕೃಷಿ ಸಚಿವರು ರೈತರ ಆದಾಯದಲ್ಲಿ ಹೆಚ್ಚಳವಾಗಿಸಿದ್ದೇವೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ರೈತರು ದೆಹಲಿಗೆ ಬಂದಿದ್ದು, ಸರ್ಕಾರ ಉತ್ತರ ಕೊಡಲಿ. ಸರ್ಕಾರದ ಆಡಳಿತ ಪ್ರಶ್ನಿಸುವವರನ್ನೆಲ್ಲ ದೇಶವಿರೋಧಿಗಳಂತೆ ನಡೆಸಿಕೊಳ್ಳುವ ಪ್ರಭುತ್ವದ ವೈಖರಿ ಪ್ರಜಾಪ್ರಭುತ್ವಕ್ಕೆ ಮಾರಕ’ ಎನ್ನುತ್ತಾರೆ ಅನೇಕ ಮುಖಂಡರು.