ನಾರಾಯಣಸ್ವಾಮಿ ಅವರ ಮನೆಗೆ ಶನಿವಾರ ರಾತ್ರಿ ದರೋಡೆಕೋರರು ನುಗ್ಗಿದ್ದಾರೆ. ಮಾಲೀಕ ನಾರಾಯಣಸ್ವಾಮಿ, ಪತ್ನಿ ಹಾಗೂ ಮಗಳು ಮನೆಯಲ್ಲಿದ್ದರು. ಚಾಕು, ಲಾಂಗ್ ತೋರಿಸಿ, ಬೆದರಿಸಿ ನಾರಾಯಣಸ್ವಾಮಿ ಅವರನ್ನು ಕಟ್ಟಿಹಾಕಿದ್ದಾರೆ. ಮಗಳು ಗರ್ಭಿಣಿಯಾಗಿದ್ದು ಹೆರಿಗೆಗೆ ತವರು ಮನೆಗೆ ಬಂದಿದ್ದರು. ದರೋಡೆಕೋರರು ಆಕೆಯ ಮಾಂಗಲ್ಯ ಸರವನ್ನು ಸಹ ಬಿಡದೆ ಕಿತ್ತುಕೊಂಡು ಹೋಗಿದ್ದಾರೆ.