ಬೆಂಗಳೂರು: ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಿಂದ ಬಸ್ಗಳ ಸಂಚಾರವನ್ನು ಮತ್ತೆ ಆರಂಭಿಸಲು ಕೆಎಸ್ಆರ್ಟಿಸಿ ಸಿದ್ಧತೆ ನಡೆಸಿದೆ.
‘ಎರಡು ವರ್ಷಗಳ ಹಿಂದೆ ಈ ನಿಲ್ದಾಣದಿಂದ ಬಸ್ಗಳ ಸಂಚಾರ ಆರಂಭಿಸಲಾಗಿತ್ತು. ಸಾರಿಗೆ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿತ್ತು. ಆದರೆ, ಈಗ ಮೆಟ್ರೊ ಸಂಪರ್ಕ ಅಭಿವೃದ್ಧಿಗೊಂಡಿರುವುದರಿಂದ ಸಮಸ್ಯೆ ಆಗುವುದಿಲ್ಲ’ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಹೇಳಿದರು.
‘ಮೆಟ್ರೊ ನಿಲ್ದಾಣದಿಂದ ಪೀಣ್ಯ ಬಸ್ ನಿಲ್ದಾಣಕ್ಕೆ 800 ಮೀಟರ್ ಇದೆ. ಜನರಿಗೆ ಅನುಕೂಲವಾಗಲೆಂದು ಮೆಟ್ರೊ ನಿಲ್ದಾಣದಿಂದ ಎಸ್ಕಲೇಟರ್ ನಡಿಗೆ ಪಥ ನಿರ್ಮಿಸಲಾಗುವುದು. ಜೊತೆಗೆ ಜಾಲಹಳ್ಳಿ ಕ್ರಾಸ್ನಿಂದ ಬಸ್ ನಿಲ್ದಾಣಕ್ಕೆ ಉಚಿತವಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುವುದು’ ಎಂದರು.