2020ರಲ್ಲಿ ಕೋವಿಡ್-19 ನಿಂದ ಇಡೀ ದೇಶವೇ ತಲ್ಲಣಗೊಂಡಿತ್ತು. ಎಲ್ಲ ಕ್ಷೇತ್ರ, ವರ್ಗದ ಜನರು ನಾನಾ ರೀತಿಯಲ್ಲಿ ತೊಂದರೆ ಅನುಭವಿಸಿದರು. ಬಹುತೇಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದರು. ಜನರು ಆರ್ಥಿಕವಾಗಿ, ಮಾನಸಿಕವಾಗಿ ಕುಸಿದಿದ್ದರು. 2021ನೇ ವರ್ಷಕ್ಕೆ ಕೊರೊನಾ ವೈರಸ್ನಿಂದ ಮುಕ್ತಿ ದೊರೆಯಲಿ. ಸಮಸ್ತ ಜನತೆಗೂ ಸುಖ, ಶಾಂತಿ, ನೆಮ್ಮದಿ ನೀಡಲಿ. ಸಕಲ ಜೀವರಾಶಿಗಳಿಗೂ ರಕ್ಷಣೆಯನ್ನು ಕೋರಿ ಶುಭ ಹಾರೈಸುವ ಸಲುವಾಗಿ ಕೇಕ್ ತಯಾರಿಸಲಾಗಿದೆ ಎಂದು ನಂದೀಶ್ ತಿಳಿಸಿದರು.