ಮಂಗಳೂರಿನ ಜೋಕಟ್ಟೆಯ ಆತೀಫ್ ಹಾಗೂ ಅವರ ಕುಟುಂಬದವರು ಚಾರ್ಮಾಡಿ ಘಾಟ್ ಮೂಲಕ ಬೆಂಗಳೂರಿಗೆ ಹೋಗುತ್ತಿದ್ದಾಗ ಜೇನುಕಲ್ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಆತೀಫ್, ಅವರ ಪತ್ನಿ, ಮಗಳು ಹಾಗೂ ಮಗಳ 8 ವರ್ಷದ ಇಬ್ಬರು ಹಾಗೂ 3 ತಿಂಗಳ ಮಕ್ಕಳು ಸೇರಿದಂತೆ ಒಟ್ಟು ಐದು ಜನ ಇದ್ದರು. ಎಲ್ಲರೂ ತಕ್ಷಣವೇ ಇಳಿದು ಹೊರ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.