ಫಲ್ಗುಣಿ, ಬಣಕಲ್, ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿಯಲ್ಲಿ ಜಾನುವಾರುಗಳ ಸಮಸ್ಯೆ ಹೆಚ್ಚಾಗುತ್ತಿದ್ದು, ಆಯಾ ಗ್ರಾಮ ಪಂಚಾಯಿತಿಯಲ್ಲಿ ದನಗಳ ಮಾಲಿಕರಿಗೆ ನೋಟಿಸ್ ನೀಡಿ ಎಚ್ಚರಗೊಳಿಸುವ ಕಾರ್ಯ ನಡೆಯಬೇಕು. ದನಗಳ ಕಿವಿಯಲ್ಲಿ ಹಳದಿ ಗುರುತು ಪಟ್ಟಿಯಿದ್ದು, ಮಾಲೀಕರ ಗುರುತನ್ನು ಪತ್ತೆ ಹಚ್ಚಬಹುದಾಗಿದೆ ಎನ್ನುತ್ತಾರೆ ಕನ್ನಡ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಹೊರಟ್ಟಿ ರಘು.