ಬಾಳೆಹೊನ್ನೂರು ಸಮೀಪದ ಗಡಿಗೇಶ್ವರದ ಮಿಥುನ್ ಹಾಗೂ ಖಾಂಡ್ಯ ಸಮೀಪ ಬಾಸಾಪುರದ ಬಿಂದು ಮಂಗಳವಾರ ಹೊರನಾಡು, ಕ್ಯಾತನಮಕ್ಕಿಗೆ ಬೈಕ್ನಲ್ಲಿ ತೆರಳಿದ್ದರು. ಮಹಾಲ್ ಗೋಡು ಬಳಿಯ ಕಾಡಿನ ನಡುವೆ ಹರಿಯುವ ಭದ್ರಾ ನದಿಯಲ್ಲಿನ ಕಲ್ಲಿನ ಬಂಡೆ ಮೇಲೆ ಇಬ್ಬರೂ ಕುಳಿತು ಸಂಜೆಯವರೆಗೂ ಮಾತುಕತೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.