ದಸರಾ ಸಂದರ್ಭದಲ್ಲಿ ನಡೆಯುವ ಕಾರಣಿಕ ಮಹೋತ್ಸವ ವೀಕ್ಷಿಸಲು ರಾಜ್ಯದ ನಾನಾ ಕಡೆಗಳಿಂದ ಸಾವಿ ರಾರು ಜನ ಬರುತ್ತಿದ್ದರು. ಆದರೆ, ಈ ಬಾರಿ ನಾಡು ಮಳೆ ಅನಾಹುತ, ರೈತ ಸಂಕಷ್ಟಗಳ ಜತೆಗೆ ಕೋವಿಡ್-19ನಿಂದಲೂ ನಲುಗಿದೆ. ಇಂತಹ ಸನ್ನಿವೇಶದಲ್ಲಿ ಮೈಲಾರಲಿಂಗ ಸ್ವಾಮಿಯವರ ಮೆರವಣಿಗೆ, ಗಾಳಿಹಳ್ಳಿ ಬಳಿ ಪಾದಕ್ಕೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಕೆ, ಬನ್ನಿ ಮುಡಿಯಲು ಮಹಾನವಮಿ ಬಯಲಿನವರೆಗೆ ತೆರಳುವ ಸಮಯದಲ್ಲಿ ನಿಗದಿತ ಸಂಖ್ಯೆಯಲ್ಲಿ ಭಕ್ತರು ದೇವರನ್ನು ಹೊತ್ತು ಸಾಗಲು ಸೂಚಿಸಲಾಗಿದೆ. ಮಹಾನವಮಿ ಬಯಲಿನಲ್ಲಿ ಸಂಪ್ರದಾಯದಂತೆ ಕಾರಣಿಕ ಮಹೋತ್ಸವ ವಿಜಯದಶಮಿಯ ರಾತ್ರಿ ಜರುಗಲಿದ್ದು, ಅಲ್ಲಿ ಕೂಡಾ ಜನರು ಸ್ವಯಂ ನಿರ್ಬಂಧ ಅನುಸರಿಸಬೇಕು’ ಎಂದು ಅವರು ಕೋರಿದ್ದಾರೆ.