ಚಿಕ್ಕಮಗಳೂರು: ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ವಿವಿಧ ಯೋಜನೆ ಫಲಾಭವಿಗಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಮಂಜೂರಾತಿ ಆದೇಶಪತ್ರವನ್ನು ವಿತರಿಸಿದರು.
ವಿಧವಾ ವೇತನ, ಅಂಕವಿಕಲ, ವೃದ್ಧಾಪ್ಯ ವೇತನ ಸಹಿತ ವಿವಿಧ ಯೋಜನೆಯ 40 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು. ಜತೆಗೆ ಸಿಡಿಲಿನಿಂದ ಮೃತಪಟ್ಟ ಜಾನುವಾರು ಮಾಲೀಕರಿಗೆ ಪರಿಹಾರದ ಚೆಕ್ ವಿತರಿಸಿದರು. ತಹಶೀಲ್ದಾರ್ ವಿನಾಯಕ್ ಸಾಗರ್, ಶಿರಸ್ತೇದಾರ್ ಐ.ಎಸ್.ಪ್ರಸನ್ನ, ಶ್ರೀನಿಧಿ, ಜ್ಯೋತಿ ಇದ್ದರು.