‘ನಮ್ಮ ತಾಯಿ ತುಂಗಮ್ಮ ಹೆಸರಿನಲ್ಲಿದ್ದ ಒಂದು ಎಕರೆ ಅಡಿಕೆ ತೋಟ, ಅಕ್ಕಪಕ್ಕದ ವಿಶ್ವನಾಥ್, ದಿವ್ಯಪ್ರಸಾದ್ ಎಂಬುವವರ ತೋಟ ಕೂಡ ಬೆಂಕಿಗೆ ಆಹುತಿಯಾಗಿದೆ. ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ಸುಟ್ಟು ಹೋಗಿವೆ. ತೋಟದ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಕಿಡಿ ಹೊತ್ತಿರಬಹುದೆಂದು ಅಂದಾಜಿಸಲಾಗಿದೆ. ಸೋಮವಾರ ಯಾರೂ ತೋಟಕ್ಕೆ ಕೆಲಸಕ್ಕೆ ಹೋಗಿರಲಿಲ್ಲ. ಹೀಗಾಗಿ, ಮಂಗಳವಾರ ವಿಷಯ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆ, ಮೆಸ್ಕಾಂಗೆ ಮಾಹಿತಿ ನೀಡಲಾಗಿದೆ. ಪರಿಹಾರಕ್ಕಾಗಿ ಶಾಸನರಿಗೆ ಮನವಿ ನೀಡಲಾಗಿದೆ’ ಎಂದು ಸಂತ್ರಸ್ತ ಪ್ರತಾಪ್ ತಿಳಿಸಿದ್ದಾರೆ.